ರಾಷ್ಟ್ರೀಯ ಗಣರಾಜ್ಯೋತ್ಸವ ಪೆರೇಡ್ ಗೆ ಕರಾವಳಿ ಮೂಲದ ಸಿನಾನ್ ಆಯ್ಕೆ

Prasthutha|

ಮಂಗಳೂರು: ಯೇನೆಪೋಯ ಡೆಂಟಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಕಕ್ಕಿಂಜೆ ಮೂಲದ ಸಿನಾನ್ ಪಿ.ಎಚ್ ಗಣರಾಜ್ಯೋತ್ಸವದ ದಿನದಂದು ನಡೆಯುವ ‘ರಿಪಬ್ಲಿಕ್ ಪೆರೇಡ್’ಗೆ ಆಯ್ಕೆ ಯಾಗಿದ್ದಾರೆ.

- Advertisement -

2022 ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಡೆಸುವ ನ್ಯಾಷನಲ್ ರಿಪಬ್ಲಿಕ್ ಪರೇಡ್ ಗೆ ಇವರು ಆಯ್ಕೆಯಾಗಿದ್ದಾರೆ.

ಈ ಪರೇಡ್ ಗೆ ಕರ್ನಾಟಕದಿಂದ ಹತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ ಯೇನೆಪೋಯ ಡೆಂಟಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸಿನಾನ್ ಪಿ.ಎಚ್ ಆಯ್ಕೆಯಾಗಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಕರಾವಳಿಯಿಂದ ಪರೇಡ್ ಗೆ ಆಯ್ಕೆಯಾದ ಒಬ್ಬನೇ ವಿದ್ಯಾರ್ಥಿಯಾಗಿದ್ದಾರೆ.

Join Whatsapp