ಸಿಪಿ(ಐ)ಎಂ ಸೇರ್ಪಡೆಯಾಗುವಂತೆ ಸಿಎಂ ಪಿಣರಾಯಿ ನನಗೆ ಆಹ್ವಾನ ನೀಡಿದ್ದರು: ಸುರೇಶ್ ಗೋಪಿ

Prasthutha|

ತಿರುವನಂತಪುರಂ: ಕೇರಳ ಸಿಎಂ ಪಿಣರಾಯಿ ವಿಜಯನ್ ನನಗೆ ಸಿಪಿ(ಐ)ಎಂ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು ಎಂದು ಕೇಂದ್ರ ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರಿಗೆ ಸಾಧ್ಯವಿದ್ದರೆ ಇದನ್ನು ನಿರಾಕರಿಸಲಿ. ನಾನು ರಾಜಕೀಯವನ್ನು ಇಷ್ಟಪಡುವುದಿಲ್ಲವಾದ್ದರಿಂದ ನಾನು ನಿಮ್ಮ ಪಕ್ಷವನ್ನು ಸೇರ್ಪಡೆಯಾಗಲಾರೆ ಎಂದು ಹೇಳಿದ್ದೆ. ಎಲ್ಲ ರಾಜಕೀಯ ನಾಯಕರಿಗೂ ನನ್ನ ಪ್ರತಿಕ್ರಿಯೆ ಇದೇ ಆಗಿತ್ತು” ಎಂದು ತಿಳಿಸಿದ್ದಾರೆ.


ಆಗಸ್ಟ್ 2, 2014ರಂದು ನಡೆದ ಕೆಲವು ಘಟನೆಗಳು ನಾನು ರಾಜಕೀಯ ಪ್ರವೇಶಿಸುವಂತೆ ಮಾಡಿದವು ಎಂದು ಅವರು ಹೇಳಿದ್ದಾರೆ. ಆದರೆ, ಅವು ಯಾವ ಘಟನೆಗಳು ಎಂದು ಅವರು ವಿವರಿಸಲಿಲ್ಲ.



Join Whatsapp