ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿ – ಸಂತೋಷ್ ಕಾಮತ

Prasthutha|

ಮಂಗಳೂರು: ಇತ್ತೀಚೆಗೆ ಮಂಗಳೂರಿನ ನಂತೂರು ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಪಟ್ಟು ಅಸುನೀಗಿದ ತರುಣ ಆತಿಷ್ ಮನೆಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ ನೇತೃತ್ವದ ನಿಯೋಗ ತೆರಳಿ ಮನೆಯವರಿಗೆ ಸಾಂತ್ವನ ಹೇಳಿತು. ಆತಿಷ್ ತಂದೆ ಯಶವಂತ ಉಪಸ್ಥಿತರಿದ್ದರು.

- Advertisement -

“ಇಂತಹ ಅನಾಹುತಗಳಿಗೆ ಕಾರಣರಾದವರನ್ನು ಶಿಕ್ಷಿಸಬೇಕು. ಇನ್ನು ಮುಂದೆ ಈ ರೀತಿಯ ಬೇಜವಾಬ್ದಾರಿ ಕೆಲಸಗಳು ಆಗಬಾರದು. ಪ್ರತಿಯೊಬ್ಬ ನಾಗರಿಕರು ಜಾಗೃತರಾಗಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವ್ಯವಸ್ಥೆ ಸರಿಯಾಗುವ ತನಕ ವಿಶ್ರಮಿಸಕೂಡದು” ಎಂದು ಅವರು ಹೇಳಿದರು.

ಬಳಿಕ ಅವರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಆತಿಶ್ ಗೆಳೆಯ ರಿತ್ವಿಕ್ ರೈ ಆ ಸಮಯದಲ್ಲಿ ಉಪಸ್ಥಿತರಿದ್ದು ಅಪಘಾತದ ವಿವರಗಳನ್ನು ನೀಡಿದರು. ತನ್ನ ಗೆಳೆಯ ಸಾಯಲು ರಸ್ತೆ ಗುಂಡಿಯೇ ಕಾರಣ, ಇನ್ಯಾರಿಗೂ ಹೀಗೆ ಆಗಬಾರದು. ಅದಕ್ಕಾಗಿ ನಾನು ಹೊರಾಡುತ್ತಿದ್ದೇನೆ ಎಂದು ಅವರು ಹೇಳಿದರು.

- Advertisement -

ಆಮ್ ಆದ್ಮಿ ಪಾರ್ಟಿಯ ದ.ಕ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್ ಪುಚ್ಚೂಪಾಡಿ, ಖಜಾಂಚಿ ಎವ್ರನ್ ಡಿಸೋಜಾ, ಸಹ ಕಾರ್ಯದರ್ಶಿ ದಿಲೀಪ್ ಲೋಬೊ, ಡೆಸ್ಮಂಡ್ ಡಿಸೋಜಾ ರವಿಪ್ರಸಾದ, ಶಾನನ್ ಪಿಂಟೋ, ಬೆನೆಟ್, ನವೀನ್ ಡಿಸೋಜ, ಜೇಮ್ಸ್ ಹಾಗೂ ಇತರರು ಉಪಸ್ಥಿತರಿದ್ದರು.

Join Whatsapp