ಗುಂಪು ಘರ್ಷಣೆ: ಟಿಪ್ಪರ್ ಹರಿಸಿ ಐವರ ಹತ್ಯೆ

Prasthutha|

ಜೈಪುರ: ಎರಡು ಗುಂಪುಗಳ ನಡುವಿನ ಘರ್ಷಣೆ‌ನಡೆದು ಐದು ಮಂದಿ ಹತ್ಯೆಯಾಗಿರುವ ಘಟನೆ ರಾಜಸ್ಥಾನದ ಜಲಾವರ್​ನಲ್ಲಿ ನಡೆದಿದೆ.

- Advertisement -

ಗೋವರ್ಧನ್ ಸಿಂಗ್, ಧೀರಜ್ ಸಿಂಗ್, ಭರತ್ ಸಿಂಗ್, ತೂಫಾನ್ ಸಿಂಗ್ ಮತ್ತು ಬಾಲು ಸಿಂಗ್ ಹತ್ಯೆಗೊಳಗಾದವರು.

ಜಲಾವರ್​ನ ಪಗಾರಿಯಾ ಪೊಲೀಸ್​ ಠಾಣೆ ವ್ಯಾಪ್ತಿಯ ವಿನಾಯಕ ಗ್ರಾಮದಲ್ಲಿ ಶನಿವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ವೇಳೆ ಎದುರಾಳಿ ತಂಡದ ಸದಸ್ಯರು ಘರ್ಷಣೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಪೊಲೀಸ್​ ಠಾಣೆಗೆ ಹೊರಟಿದ್ದಾರೆ. ಈ ವೇಳೆ ಕುಪಿತಗೊಂಡ ಆರೋಪಿಗಳು ಅವರ ಮೇಲೆ ಟಿಪ್ಪರ್​ ಹತ್ತಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

- Advertisement -

ಘಟನೆ ನಡೆದ ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸ್​ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Join Whatsapp