ಸುಳ್ಯ : ಹುಡುಗಿ ವಿಚಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮಧ್ಯೆ ಮಾರಾಮಾರಿ, ಕಾರು ಜಖಂ

Prasthutha|

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರು ಎಂಬಲ್ಲಿ ಬಜರಂಗದಳದ ಎರಡು ಗುಂಪುಗಳ ಮಧ್ಯೆ ಹುಡುಗಿಯ ವಿಚಾರವಾಗಿ ಹೊಡೆದಾಟ ನಡೆದಿದ್ದು, ಕಾರನ್ನು ಜಖಂಗೊಳಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಅಪ್ರಾಪ್ತ ಶಾಲಾ ಬಾಲಕಿಯೊಬ್ಬಳನ್ನು ಬಜರಂಗದಳದ ಕಾರ್ಯಕರ್ತನೊಬ್ಬ ಆಕೆಯ ಮನೆಗೆ ಬಿಡಲೆಂದು   ಪುತ್ತೂರಿನಿಂದ ಕಾರೊಂದರಲ್ಲಿ ಕರೆ ತಂದಿದ್ದಾನೆ. ಇದನ್ನು ಗಮನಿಸಿದ್ದ ಯುವಕರ ಮತ್ತೊಂದು ಗುಂಪು ಹಾಗೂ ಹುಡುಗಿಯ ಮನೆಯವರು ಕಾರನ್ನು ತಡೆದು ನಿಲ್ಲಿಸಿ ಆ ಯುವಕನ ಮೇಲೆ ಹಾಗೂ ರಿಕ್ಷಾ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಮಾತ್ರವಲ್ಲ ಕಾರನ್ನು ಕೂಡಾ ಜಖಂಗೊಳಿಸಿದ್ದಾರೆ.

ಪರಸ್ಪರ ಹೊಡೆದಾಟ ನಡೆಸಿದ ಬಜರಂಗದಳದ ಎರಡು ಗುಂಪುಗಳು ನಂತರ ಆಸ್ಪತ್ರೆಗೆ ದಾಖಲಾಗಲು ಸುಳ್ಯಕ್ಕೆ ತೆರಳಿದ್ದಾರೆ. ಈ ವೇಳೆ ಬಜರಂಗದಳದ ನಾಯಕರು ಮಧ್ಯ ಪ್ರವೇಶಿಸಿ ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ರಕ್ಷಿತ್ ಎನ್ನುವ ಯುವಕನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Join Whatsapp