ಸಿದ್ದಾಪುರ | ಸ್ವಚ್ಛತಾ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಉಪವಾಸ ಸತ್ಯಾಗ್ರಹ

Prasthutha|

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯತಿ ನೌಕರರ ಸಂಘ ಸಿದ್ದಾಪುರ ಗ್ರಾಮ ಪಂಚಾಯತಿ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

- Advertisement -

ಸ್ವಚ್ಛತಾ ಸಿಬ್ಬಂದಿಗಳ ಒಂದು ತಿಂಗಳ ವೇತನ ಬಾಕಿ ಇರಿಸಿರುವುದು, ನೌಕರರ ಅನುಮೋದನೆಗೆ ಬೇಕಾದ ದಾಖಲಾತಿಗಳನ್ನು ಈ.ಓ ಕಚೇರಿಗೆ ಕಳುಹಿಸದೆ ವಿಳಂಬ ಮಾಡುತ್ತಿರುವುದು, ಮೂವತ್ತು ವರ್ಷಗಳಿಂದ ಕೆಲಸ ನಿರ್ವಹಿಸಿರುವ ಕಾರ್ಮಿಕರಿಗೆ ನೀಡಬೇಕಾದ ಗ್ರಾಚ್ಯುಟಿ (ಉಪಧನ) ನೀಡದೆ ಇರುವುದು, ರಜಾ ದಿನದಲ್ಲಿ ಮಾಡಿದ ಕೆಲಸದ ಹೆಚ್ಚುವರಿ ಕೂಲಿ ನೀಡದೆ ಇರುವುದು, ಸ್ವಚ್ಛತಾ ಕೆಲಸ ಮಾಡುವ ಕಾರ್ಮಿಕರು ಇರುವಾಗ ಅಸ್ಸಾಮಿ ಕಾರ್ಮಿಕರಿಂದ ಕೆಲಸ ಮಾಡಿಸಿ ಸಿದ್ದಾಪುರದಲ್ಲಿ ತಲತಲಾಂತರಗಳಿಂದ ಸಿದ್ದಾಪುರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Join Whatsapp