ಕೋಟಿಗಳ ವಂಚನೆ: ಚಿಟ್ ಫಂಡ್ ಡೈರೆಕ್ಟರ್ ಬಂಧನ

Prasthutha|

ಬೆಂಗಳೂರು: ಚಿಟ್ ಫಂಡ್ – ಫೈನಾನ್ಸ್ ಹೆಸರಲ್ಲಿ ಕೋಟಿಗಳ ವಂಚನೆ ಮಾಡಿದ ಆರೋಪದ ಮೇಲೆ ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್ ಅನಂತರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಆರೋಪಿ ಅನಂತರಾಮ್ 2009 ರಲ್ಲಿ ಪಂಚಮುಖಿ ಚಿಟ್ ಫಂಡ್ ತೆರೆದಿದ್ದು, ಚಿಟ್ ,ಫೈನಾನ್ಸ್, ವಾಹನ ಸಾಲ ಮುಂತಾದ  ಹಲವು ರೀತಿಯ ವ್ಯವಹಾರ ಮಾಡುತ್ತಿದ್ದ. 400 ಗ್ರಾಹಕರು  ಈ ಸಂಸ್ಥೆಯ ಸದಸ್ಯತ್ವ ಹೊಂದಿದ್ದರು. ಇದೀಗ ಸರಿಸುಮಾರು  30 ಕೋಟಿಯಷ್ಟು ಹಣವನ್ನು ವಂಚಿಸಿದ ಆರೋಪಿ ಕಳೆದ 10 ದಿನಗಳ ಹಿಂದೆ ಚಿಟ್ ಫಂಡ್ಗೆ ಬಾಗಿಲು ಹಾಕಿ ಪರಾರಿಯಾಗಿದ್ದ.

ವರ್ಷಕ್ಕೆ 24% ಬಡ್ಡಿ ಆಸೆ ತೋರಿಸಿ ವಂಚಿಸಿರುವ ಆರೋಪಿ ಅನಂತರಾಮ್ ನನ್ನು ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಬಂಧಿಸಿರುವ  ಬನಶಂಕರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



Join Whatsapp