ಜ್ಯೂಸ್ ಎಂದು ಕೀಟನಾಶಕ ಸೇವಿಸಿ ಮಗು ಮೃತ್ಯು

Prasthutha|

ರಾಮನಗರ: ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್ (2) ಮೃತ ಮಗು.

ಜಮೀನಿಗೆ ಸಿಂಪಡಿಸಲು ಕೀಟನಾಶಕ ತಂದಿದ್ದರು. ಯಶ್ವಿಕ್ ಕೈಗೆ ಈ ಕೀಟನಾಶಕದ ಬಾಟಲಿ ಸಿಕ್ಕಿದೆ. ಜ್ಯೂಸ್ ಇರಬಹುದು ಎಂದು ತಿಳಿದ ಯಶ್ವಿಕ್ ಕೀಟನಾಶಕವನ್ನು ಕುಡಿದು ಬಿಟ್ಟಿದೆ. ಕೀಟನಾಶಕ ಕುಡಿದ ಪರಿಣಾಮ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದೆ.
ಕೂಡಲೇ ಪೋಷಕರು ಯಶ್ವಿಕ್ ನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೀಟನಾಶಕ ದೇಹದೊಳಗೆ ಪೂರ್ತಿ ಸೇರಿದ್ದರಿಂದ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.

Join Whatsapp