ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿ; ಬಿಡಾಡಿ ದನಗಳ ಭೀಕರ ಸಾವು

Prasthutha|

ಮೂಡಿಗೆರೆ: ಅಪರಿಚಿತ  ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮೂರು ದನಗಳುಸ್ಥಳದಲ್ಲೇ ಮೃತಪಟ್ಟ ಘಟನೆ ಬಗ್ಗಸಗೊಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

- Advertisement -

ಇದು ಧರ್ಮಸ್ಥಳ ಹಾಗೂ ಮಂಗಳೂರು ಮತ್ತು ಹೊರನಾಡು , ಶೃಂಗೇರಿ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಯಾಗಿದ್ದು ಸಾವಿರಾರು ವಾಹನಗಳು  ಚಲಿಸುವ ರಸ್ತೆಯಾಗಿದೆ.

 ತಾಲೂಕಿನಾದ್ಯಂತ ನೂರಾರು ಬಿಡಾಡಿ ದನಗಳು ಹಗಲು ರಾತ್ರಿಯನ್ನದೇ ರಸ್ತೆಯಲ್ಲೇ  ತಿರುಗಾಡುತ್ತಿದ್ದು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಕೆಲವು ದನಗಳ ವಾರಿಸುದಾರರು ಇದ್ದರೂ ಕೂಡ ಕಟ್ಟದೇ ಬೇಕಾಬಿಟ್ಟಿ ರಸ್ತೆಯಲ್ಲಿಯೇ  ಬಿಟ್ಟಿರುತ್ತಾರೆ. ಕಳೆದ ಒಂದು ತಿಂಗಳಿಂದ 50 ಕ್ಕೂ ಹೆಚ್ಚು ದನಗಳು ಅಪರಿಚಿತ ವಾಹನಗಳಿಗೆ ಬಲಿಯಾಗಿವೆ.

- Advertisement -

ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ದನಗಳ ಸಾವುಗಳು ಕಂಡುಬರುತ್ತಿದ್ದು, ಕೂಡಲೇ ಆಯಾ  ಗ್ರಾಮ ಪಂಚಾಯಿತಿ  ವ್ಯಾಪ್ತಿಗೆ ಸೇರುವ ಅಧಿಕಾರಿಗಳು ದನಗಳನ್ನು ಗೋ ಶಾಲೆಗೆ ಸೇರಿಸಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.




Join Whatsapp