ಚಿಕ್ಕಮಗಳೂರು: ಹೃದಯಾಘಾತದಿಂದ ಶಾಲಾ  ಬಾಲಕಿ ಮೃತ್ಯು

Prasthutha|

ಮೂಡಿಗೆರೆ:  ಹೃದಯಾಘಾತದಿಂದ ಶಾಲಾ  ಬಾಲಕಿಯೊಬ್ಬಳು ಮೃತಪಟ್ಟಿರುವ  ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

- Advertisement -

ಮೂಡಿಗೆರೆ ನಗರದ  ಬೆಥನಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಮೃತ ಬಾಲಕಿ. ನಿನ್ನೆ ರಾತ್ರಿ 7.30 ರ ವೇಳೆಗೆ ಹೃದಯಾಘಾತ ಸಂಭವಿಸಿದೆ ಎಂದು ಪೋಷಕರು ತಿಳಿಸಿದ್ದಾರೆ.

ಮಗಳ ವಿರಹದ ನೋವಿನ ನಡುವೆಯೂ  ಬೇರೊಬ್ಬರ ಬಾಳು ಬೆಳಕಾಗಲಿ ಎಂಬ ಸಂಕಲ್ಪ ಕೈಗೊಂಡ ಹೆತ್ತವರು  ಆಕೆಯ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದರು.

- Advertisement -

ವೈಷ್ಣವಿಯ ವಿರಹವು ಕುಟುಂಬಿಕರ ಸಹಿತ  ಸ್ನೇಹಿತರು, ಶಾಲಾ ಶಿಕ್ಷಕರು ಮತ್ತು ಸಾರ್ವಜನಿಕರಲ್ಲಿ ಅತೀವ ದುಃಖವನ್ನುಂಟು ಮಾಡಿದೆ.

Join Whatsapp