ಚಿಕ್ಕಮಗಳೂರು: ಹುಲಿಯ ದಾಳಿಗೆ ಐದು ಹಸುಗಳು ಬಲಿ

Prasthutha|

ಚಿಕ್ಕಮಗಳೂರು: ಆನೆ ದಾಳಿ ವರದಿಯಾಗುತ್ತಿದ್ದ ಚಿಕ್ಕಮಗಳೂರಿನಲ್ಲಿ ಹುಲಿಯ ದಾಳಿಗೆ ಐದು ಹಸುಗಳು ಬಲಿಯಾದ ಘಟನೆ ನಡೆದಿದೆ. ಘಟನೆ ಚಿಕ್ಕಮಗಳೂರು ತಾಲೂಕಿನ ಕಠಾರದಹಳ್ಳಿಯಲ್ಲಿ ನಡೆದಿದೆ.

- Advertisement -

ಹುಲಿ ದಾಳಿಗೆ ಚಂದ್ರು-ಮುಳ್ಳಪ್ಪ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಮೇಯಲು ಬಿಟ್ಟ ಹಸುಗಳು ಮನೆಗೆ ಬಂದಿರಲಿಲ್ಲ. ಮರುದಿನ ಕಾಫಿ ತೋಟದಲ್ಲಿ ಹಸುವಿನ ಮೃತದೇಹಗಳು ಪತ್ತೆಯಾಗಿದೆ.

ಒಂದು ಹಸು ಗಾಯಗೊಂಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

- Advertisement -

ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಆನೆ ದಾಳಿಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಹುಲಿ ದಾಳಿಯ ಭೀತಿ ಎದುರಾಗಿದೆ. ಹುಲಿಯ ದಾಳಿಗೆ ಬೆಚ್ಚಿಬಿದ್ದಿರುವ ಜನರು ಮನೆಯಿಂದ ಹೊರಬಾರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ‌.



Join Whatsapp