ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ಆಂಬ್ಯುಲೆನ್ಸ್ ಸೇವೆಗೆ ವಿನಿಯೋಗಿಸಿದ ಚಾರ್ಮಾಡಿ ಹಸನಬ್ಬ: ಸಚಿವ ದಿನೇಶ್ ಗುಂಡೂರಾವ್ ಚಾಲನೆ

Prasthutha|

ಮಂಗಳೂರು: ದಶಕಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಚಾರ್ಮಾಡಿ ಹಸನಬ್ಬರಿಗೆ ರಾಜ್ಯ ಸರಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಪ್ರಶಸ್ತಿ ಮೊತ್ತವಾಗಿ ಬಂದ 5 ಲಕ್ಷದ ಜೊತೆಗೆ 3 ಲಕ್ಷ ರೂಪಾಯಿ ಬ್ಯಾಂಕ್ ಸಾಲವನ್ನು ಪಡೆದ ಹಸನಬ್ಬ ಅವರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಆಂಬ್ಯುಲೆನ್ಸ್ ಖರೀದಿಸಿದ್ದಾರೆ.

- Advertisement -


ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಸನಬ್ಬ ಆಂಬ್ಯುಲೆನ್ಸ್ ಸೇವೆಗೆ ಇಂದು ಶುಕ್ರವಾರ ಚಾಲನೆ ನೀಡಿದರು. ಮಂಗಳೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.


ಚಾರ್ಮಾಡಿ ಹಸನಬ್ಬ ಅವರು 1980ರ ದಶಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಾಡಿರುವ ಸೇವೆ ಅಮೋಘ. ನೂರಾರು ಅಪಘಾತ ಗಾಯಾಳುಗಳನ್ನು ಅವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಅಲ್ಲದೇ, ತಮ್ಮದೇ ಯುವಕರ ತಂಡ ಕಟ್ಟಿಕೊಂಡು ರಾತ್ರಿ, ಹಗಲೆನ್ನದೇ, ಮಳೆ, ಗಾಳಿ ಎನ್ನದೇ ಪಶ್ಚಿಮ ಘಟ್ಟದಲ್ಲಿ ಅಪಘಾತವಾದರೆ ಅವರ ರಕ್ಷಣೆಗೆ ಧಾವಿಸುತ್ತಿದ್ದರು.

Join Whatsapp