ಚಾಮರಾಜಪೇಟೆ ಪಟಾಕಿ ಸ್ಪೋಟ ಪ್ರಕರಣ| ಸಂತ್ರಸ್ತ ಕುಟುಂಬಗಳಿಗೆ 2ಲಕ್ಷ ರೂ. ಪರಿಹಾರ ನೀಡಿದ ಝಮೀರ್

Prasthutha|

ಬೆಂಗಳೂರು: ಚಾಮರಾಜಪೇಟೆಯ ತರಗುಪೇಟೆಯಲ್ಲಿ ನಿನ್ನೆ ಸಂಭವಿಸಿದ ಸ್ಪೋಟದಲ್ಲಿ ಸಾವನ್ನಪ್ಪಿದ ಮುರಳೀಧರನ್ ಮೃತದೇಹವನ್ನು ರವಾನಿಸಲಾಗಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ನಿನ್ನೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ತರಗುಪೇಟೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟ ಮುರುಳೀಧರನ್ ಅವರ ಪಾರ್ಥಿವ ಶರೀರವನ್ನು ತಮಿಳುನಾಡಿಗೆ ಕಳುಹಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮೃತರ ಕುಟುಂಬದವರಿಗೆ ರೂ. 2 ಲಕ್ಷ ನೆರವು ನೀಡಿದ್ದೇನೆ. ಬಡವರ ಮನೆಯ ದುಡಿಯುವ ಜೀವಗಳು ಇಲ್ಲವಾದಾಗ ಆ ಮನೆಯ ಕಷ್ಟ ಊಹಿಸಿದರೆ ಮನಸು ನಲುಗುತ್ತದೆ ಎಂದು ಹೇಳಿದ್ದಾರೆ.

ಚಾಮರಾಜಪೇಟೆಯ ನಗರ್ತಪೇಟೆಯ ಪಟಾಕಿ ಗೋದಾಮಿನಲ್ಲಿ ನಿನ್ನೆ ಮಧ್ಯಾಹ್ನ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದರು.

Join Whatsapp