ಫೆಲೋಶಿಪ್ ಕಡಿತಗೊಳಿಸಿದ ಆದೇಶವನ್ನು ಹಿಂಪಡೆದ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ : ಕ್ಯಾಂಪಸ್ ಫ್ರಂಟ್

Prasthutha|

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಪಿ ಎಚ್ ಡಿ / ಎಂ ಫಿಲ್ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್ ನ್ನು ಕಡಿತಗೊಳಿಸುವ ಕುರಿತು ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ರಾಜ್ಯಾದ್ಯಂತ ಕ್ಯಾಂಪಸ್ ಫ್ರಂಟ್ ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಿ ರಾಜ್ಯ ಸರಕಾರದ ವಿದ್ಯಾರ್ಥಿ ವಿರೋಧಿ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

- Advertisement -

ಸಂಶೋಧನಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಹಲವು ರೀತಿಯ ಅಡೆತಡೆಗಳನ್ನು ಎದುರಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಸೃಜನಶೀಲ ವಿಚಾರಗಳ ಮೂಲಕ ಹಲವಾರು ಸಮಾಜಮುಖಿ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಹಿಂದೆ ಫೆಲೋಶಿಪ್ ಕಡಿತಗೊಳಿಸಿ ಅದೇಶಿಸಿದ್ದ ರಾಜ್ಯ ಸರಕಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ತನ್ನ ತಪ್ಪಿನ ಅರಿವಿನಿಂದಾಗಿ ಫೆಲೋಶಿಪ್
ಕಡಿತಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದದ್ದು ಒಳ್ಳೆಯ ವಿಚಾರ, ಈ ಹೋರಾಟದ ಭಾಗವಾಗಿ ವಿದ್ಯಾರ್ಥಿಗಳ ಧ್ವನಿಯಾದ ಪ್ರತಿಯೊಬ್ಬರಿಗೂ ಕ್ಯಾಂಪಸ್ ಫ್ರಂಟ್ ಅಭಿನಂದಿಸುತ್ತದೆ, ಮುಂದಿನ ದಿನಗಳಲ್ಲಿ ಆಗುವ ಅನ್ಯಾಯಗಳ, ತಾರತಮ್ಯ ನೀತಿಗಳ ವಿರುದ್ಧ ಹೀಗೆ ಧ್ವನಿಯಾಗುವಿರಿ ಎಂಬ ಬಯಕೆಯೊಂದಿಗೆ ಈ ಹೋರಾಟದಲ್ಲಿ ಹಲವು ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿಗಳು ಕೈಜೋಡಿಸಿದ ಫಲವಾಗಿ ಸಮಾಧಾನಕರ ಫಲಿತಾಂಶ ದೊರೆತಿದೆ ಎಂದು ಕ್ಯಾಂಪಸ್ ಫ್ರಂಟ್ ಕರ್ಣಾಟಕ ರಾಜ್ಯ ಕೋಶಾಧಿಕರಿಗಳಾದ ಸವಾದ್ ಕಲ್ಲರ್ಪೆ ಅಭಿಪ್ರಾಯಪಟ್ಟಿದ್ದಾರೆ.

Join Whatsapp