ಲಂಚ ಪ್ರಕರಣ: GAIL ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿ ಐವರನ್ನು ಬಂಧಿಸಿದ ಸಿಬಿಐ

Prasthutha|

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ಜಿಎಐಎಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಲಂಚ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ.

- Advertisement -

 ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಬಿ ಸಿಂಗ್ ಹಾಗೂ ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಭಾರತೀಯ ಅನಿಲ ಪ್ರಾಧಿಕಾರ ಜಿಎಐಎಲ್​ನ ಮುಖ್ಯ ಜನರಲ್ ಮ್ಯಾನೇಜರ್ ದಾವಿಂದರ್ ಸಿಂಗ್, ವಡೋದರಾದ ಅಡ್ವಾನ್ಸ್ ಇನ್​ಫ್ರಾಸ್ಟ್ರಕ್ಚರ್ಸ್​ನ ನಿರ್ದೇಶಕ ಸುರೇಂದರ್ ಕುಮಾರ್ ಅವರು ಇತರ ಬಂಧಿತರ ಪೈಕಿ ಇದ್ದಾರೆ.

ಇವರ ವಿರುದ್ಧ 50 ಲಕ್ಷ ರೂ ಮೊತ್ತದ ಲಂಚ ಪ್ರಕರಣ ಇದೆ. ಬ್ರೈಬರಿ ಕೇಸ್​ನಲ್ಲಿ ಜಿಎಐಎಲ್​ನ ಅಧಿಕಾರಿಗಳನ್ನು ಬಂಧಿಸಲಾಗಿರುವುದನ್ನು ಸಂಸ್ಥೆ ಕೂಡ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಖಚಿತಪಡಿಸಿದೆ.

- Advertisement -

ಏನಿದು ಲಂಚ ಪ್ರಕರಣ?

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ. ಸಂಸ್ಥೆಯ ಎರಡು ಪೈಪ್​ಲೈನ್ ಯೋಜನೆಗಳಲ್ಲಿ ಲಂಚ ಸ್ವೀಕರಿಸಿದ ಆರೋಪ ಇದೆ. ಆಂಧ್ರದ ಶ್ರೀಕಾಕುಲಂನಿಂದ ಅಂಗುಲ್​ವರೆಗಿನ ಒಂದು ಪೈಪ್​ಲೈನ್ ಯೋಜನೆ, ಹಾಗು ವಿಜಯ್​ಪುರ್​ನಿಂದ ಔರಾಯವರೆಗಿನ ಇನ್ನೊಂದು ಪೈಪ್​ಲೈನ್ ಯೋಜನೆಯಲ್ಲಿ ಲಂಚ ಪಡೆಯಲಾದ ಆರೋಪ ಇದೆ.

ಸಿಬಿಐ ಈ ನಿಟ್ಟಿನಲ್ಲಿ ಜಿಎಐಎಲ್​ನ ಹಿರಿಯ ಅಧಿಕಾರಿಗಳ ಕಚೇರಿಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿ, ಇಂದು (ಸೆ. 5) ಐವರನ್ನು ಬಂಧಿಸಿದೆ.

ದೆಹಲಿ, ನೋಯ್ಡಾ, ವಿಶಾಖಪಟ್ಟಣಂನ ವಿವಿಧ ಜಾಗದಲ್ಲಿ ಸಿಬಿಐ ಶೋಧ ನಡೆಸಿದೆ. ಈಗಲೂ ಕೂಡ ದೆಹಲಿ, ನೋಯ್ಡಾ, ವಿಶಾಖಪಟ್ಟಣಂ ಇನ್ನೂ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.

Join Whatsapp