ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಸವರ್ಣೀಯರು: ವೀಡಿಯೋ ವೈರಲ್

Prasthutha|

ರಾಯಚೂರು: ಕುಡಿದು ಅವಹೇಳನ ಮಾಡಿದ್ದಾನೆಂದು ಆರೋಪಿಸಿ ಸವರ್ಣೀಯರ ಗುಂಪೊಂದು ದಲಿತ ವ್ಯಕ್ತಿಯೊಬ್ಬನನ್ನು ಲೈಟಿನ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಮುದಗಲ್ ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.

- Advertisement -

ಬೈಲಪ್ಪ ಹನುಮಂತಪ್ಪ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ಘಟನೆ ಕುರಿತು ಬೈಲಪ್ಪ ನೀಡಿದ ದೂರಿನ ಅನ್ವಯ ದುರುಗನಗೌಡ, ಶಂಕರಗೌಡ, ಬುಕ್ಕನಗೌಡ, ಗದ್ದಮ್ಮ, ಹನುಮನಗೌಡ, ಸೂರಪ್ಪಗೌಡ, ಅಮರೇಗೌಡ, ಲಕ್ಷ್ಮಮ್ಮ, ನೀಲನಗೌಡ  ಮತ್ತು  ತಿಮ್ಮನಗೌಡ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

- Advertisement -

ಗುಂಪೊಂದು ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಹೊರಗಡೆ ಮನೆಯಿಂದ ಎಳೆದುತಂದು ಲೈಟಿನ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ  ಎಂದು ಬೈಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp