ಬಜರಂಗದಳದ ಸಂಚಾಲಕನಿಂದ ವಿವಾಹಿತೆಯ ಅಪಹರಣ: ಕೇಸು ದಾಖಲು

Prasthutha|

ಉಡುಪಿ: ವಿವಾಹಿತೆಯನ್ನು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶ್ವಹಿಂದು ಪರಿಷತ್ ಬಜರಂಗದಳದ ಸಂಚಾಲಕನ ವಿರುದ್ಧ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -


ಕಾರ್ಕಳ ಭಜಗೋಳಿ ಬಜರಂಗದಳದ ಸಹ ಸಂಚಾಲಕನಾಗಿರುವ ಸಂದೀಪ್ ಆಚಾರ್ಯ ಎಂಬಾತನ ವಿರುದ್ಧ ಮಹಿಳೆ ಅಪಹರಣ ದೂರು ದಾಖಲಾಗಿದೆ. ಈ ಬಗ್ಗೆ ಮಹಿಳೆಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿ ವಾಸವಾಗಿರುವ ಬಜರಂಗದಳದ ಕಾರ್ಯಕರ್ತ ಹರೀಶ್ ಎಂಬವರ ಪತ್ನಿ 2 ವರ್ಷದ ಮಗುವಿನ ತಾಯಿಯಾಗಿದ್ದು , ಒಂದು ವಾರದ ಹಿಂದೆ ತನ್ನ ತವರು ಮನೆಗೆ ಹೋಗಿದ್ದ ವೇಳೆ ಕಾರ್ಕಳ ಬಜರಂಗದಳದ ಭಜಗೋಳಿ ವಲಯ ಸಹ ಸಂಚಾಲಕನಾಗಿರುವ ಸಂದೀಪ್ ಆಚಾರ್ಯ ಅಪಹರಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp