ಪ್ರವಾದಿ ಬಗ್ಗೆ ಅವಹೇಳನಕಾರಿ ವರದಿ: “ವಿಶ್ವವಾಣಿ” ಪತ್ರಿಕೆಯ ವಿರುದ್ಧ ಕೇಸು ದಾಖಲು

Prasthutha|

ಮಂಗಳೂರು: ಪ್ರವಾದಿಯವರ ಬಗ್ಗೆ ಅವಹೇಳನಕಾರಿ ವರದಿ ಮಾಡಿದ್ದ “ವಿಶ್ವವಾಣಿ”ಪತ್ರಿಕೆಯ ವಿರುದ್ಧ ಬಂದರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -


ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ವಿಶ್ವವಾಣಿ ಪತ್ರಿಕೆಯು ತನ್ನ ತಲೆ ಬರಹದಲ್ಲಿ “ಪ್ರವಾದಿ ಹಿಂಸಾಚಾರ” ಎಂಬ ವರದಿ ಪ್ರಕಟಿಸಿತ್ತು. ಇಸ್ಲಾಮ್ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ವರದಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೇಲೆ ಎತ್ತಿಕಟ್ಟಿ, ಕೋಮು ಗಲಭೆ ಮಾಡಲು ಜನರಿಗೆ ಪರೋಕ್ಷವಾಗಿ ಪ್ರೇರಣೆ ನೀಡಿ ಕೋಮು ಗಲಭೆಗೆ ಪತ್ರಿಕೆಗೆ ಯತ್ನಿಸಿದೆ. ಆದುದರಿಂದ ಈ ವರದಿ ಪ್ರಕಟಿಸಿರುವ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರ ಮತ್ತು ಅದಕ್ಕೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬಂದರ್ ನಿವಾಸಿ ಇಕ್ಬಾಲ್ ದೂರಿನಲ್ಲಿ ಮನವಿ ಮಾಡಿದ್ದಾರೆ.

- Advertisement -



Join Whatsapp