ಮುಸ್ಲಿಮರ ನರಮೇಧಕ್ಕೆ ಕರೆ । ಯತಿ ನರಸಿಂಹಾನಂದ್ ವಿರುದ್ಧ ಪ್ರಕರಣ ದಾಖಲು

Prasthutha|

ನವದೆಹಲಿ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ್ ವಿರುದ್ಧ ದ್ವೇಷ ಭಾಷಣಕ್ಕಾಗಿ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಸಂಘಪರಿವಾರ ಮುಖಂಡರು ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ನರಮೇಧಕ್ಕೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಆಯುಧ ತೆಗೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

- Advertisement -

ನರಸಿಂಹಾನಂದ್ ಈ ಹಿಂದೆಯೂ ಕೂಡ ದ್ವೇಷ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವಿದೆ. ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂಸಾಚಾರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಿಸ್ಪಟ್ಟ ಐದನೇ ವ್ಯಕ್ತಿಯೇ ಯತಿ ನರಸಿಂಹಾನಂದ್.

ಹರಿದ್ವಾರ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಸಾಗರ್ ಸಿಂಧು ಮಹಾರಾಜ್, ಸಾಧ್ವಿ ಅನ್ನಪೂರ್ಣ, ಧರಮ್ ದಾಸ್, ಜಿತೇಂದ್ರ ತ್ಯಾಗಿ ಯಾನೆ ವಸೀಮ್ ರಿಝ್ವಿ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

- Advertisement -

ಟಿಎಂಸಿ ಮುಖಂಡ, ಆರ್.ಟಿ.ಐ. ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿದ ದೂರಿನ ಆಧಾರದಲ್ಲಿ ಹಿಂದೂ ರಕ್ಷಣಾ ಸೇನೆಯ ಪ್ರಬೋಧಾನಂದ ಗಿರಿ, ಬಿಜೆಪಿ ನಾಯಕಿಯರಾದ ಉದಿತಾ ತ್ಯಾಗಿ, ಅಶ್ವಿನಿ ಉಪಾಧ್ಯಾಯ ದ್ವೇಷಪೂರಿತ ಭಾಷಣಕ್ಕಾಗಿ ಜಾಮೀನು ಪಡೆದಿದ್ದರು.

ಈ ಮಧ್ಯೆ ಕಾರ್ಯಕ್ರಮದ ಸಂಘಟಕ, ಭಾಷಣಕಾರ ಯತಿ ನರಸಿಂಹಾನಂದ್ ಯಾವುದೇ ತಪ್ಪು ಮಾಡಿಲ್ಲ ಎಂದು ಪಟ್ಟು ಹಿಡಿದಿದ್ದರು.

Join Whatsapp