ಕ್ಯಾಂಟರ್- ಬೈಕ್ ಡಿಕ್ಕಿ; ಇಬ್ಬರು ದಾರುಣ ಸಾವು

Prasthutha|

ಬೆಂಗಳೂರು: ವೇಗವಾಗಿ ಬಂದ  ಕ್ಯಾಂಟರ್  ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯ ಲಕ್ಷ್ಮಿಪುರ ಗೇಟ್ ಬಳಿ  ನಡೆದಿದೆ.

- Advertisement -

ಬಾಲೇಪುರ ಗ್ರಾಮದ ರಾಕೇಶ್ (22) ಹಾಗೂ ದೇವನಹಳ್ಳಿ ಪಟ್ಟಣದ ಪ್ರತಾಪ್ (28) ಮೃತಪಟ್ಟವರು. ಬೈಕ್​​ನಲ್ಲಿ ಹೋಗುತ್ತಿದ್ದಾಗ ಎದುರುನಿಂದ ಬಂದ ಕ್ಯಾಂಟರ್ ಡಿಕ್ಕಿ‌ ಹೊಡೆದ ರಭಸಕ್ಕೆ ಕ್ಯಾಂಟರ್‌ನೊಳಗೆ ಅರ್ಧ ಬೈಕ್ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.

ದಿಲೀಪ್ ಬಿಲ್ಡ್ ಕನ್ಸ್ಟ್ರಕ್ಷನ್‌ನಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ವಿಭಜಕದಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸದ ಕಾರಣ ಅವಘಡ ಸಂಭವಿಸಿದೆ.

- Advertisement -

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್​ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp