ಕಾಂಗ್ರೆಸ್​ ನವರು ಮಾತ್ರವಲ್ಲ, ಯಡಿಯೂರಪ್ಪ, ವಿಜಯೇಂದ್ರ ಕೂಡ ಜೈಲಿಗೆ ಹೋಗುತ್ತಾರೆ: ಯತ್ನಾಳ್ ಹೊಸ ಬಾಂಬ್

Prasthutha|

ಹಾವೇರಿ: ಕಾಂಗ್ರೆಸ್​ ನವರು ಮಾತ್ರವಲ್ಲ, ಬಿಜೆಪಿಯ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಕೂಡ ಜೈಲಿಗೆ ಹೋಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಹೊಸ ಬಾಂಬ್​ ಸಿಡಿಸಿದ್ದಾರೆ.

- Advertisement -

ಅವರು ದುಬೈ ಮತ್ತು ಮಾರಿಷಸ್​ನಲ್ಲಿ ಆಸ್ತಿ ಮಾಡಿದ್ದಾರೆ, ಹಾಗಾಗಿ ವಿಜಯೇಂದ್ರ ಆಗಾಗ ಆ ದೇಶಗಳಿಗೆ ಹೋಗಿ ಬರುತ್ತಾರೆ ಎಂದರು.
ಕೆಲವು ಸ್ವಾಮೀಜಿಗಳು 10 ಕೋಟಿ ರೂಪಾಯಿ ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ. ಯಡಿಯೂರಪ್ಪ ಮಠಕ್ಕೆ ಹತ್ತು ಕೋಟಿ ನೀಡಿರುವ ಅನುದಾನದಲ್ಲಿ ಸಹ ಅವ್ಯವಹಾರವಾಗಿದೆ. ಇದನ್ನು ವಿಧಾನಸಭೆ ಕಲಾಪದಲ್ಲಿ ಬಹಿರಂಗಗೊಳಿಸುವುದಾಗಿ ಯತ್ನಾಳ್ ಹೇಳಿದ್ದಾರೆ.



Join Whatsapp