ಮುಸ್ಲಿಮರ ಜೊತೆ ಮದುವೆಯಾಗುವ ಕುಟುಂಬವನ್ನು ಬಹಿಷ್ಕರಿಸಿ: ಸರಕಾರಿ ಲೆಟರ್ ಹೆಡ್ ನಲ್ಲಿ ಪತ್ರ !

Prasthutha|

ಹುಬ್ಬಳ್ಳಿ: ಮುಸ್ಲಿಮರ ಜೊತೆಗೆ ಮದುವೆಯಾಗುವ ತಮ್ಮ ಸಮಾಜದ ಕುಟುಂಬವನ್ನು ಬಹಿಸ್ಕರಿಸಿ ಎಂದು  ಸರ್ಕಾರಿ ಲೆಟರ್ ಹೆಡ್​ ನಲ್ಲೇ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ ಎಂಬವರು ಎಸ್.ಎಸ್.ಕೆ ಸಮಾಜದ ಧರ್ಮದರ್ಶಿಗೆ ಪತ್ರ ಬರೆದಿದ್ದಾರೆ.

- Advertisement -

ಇತ್ತೀಚೆಗೆ ಎಸ್.ಎಸ್.ಕೆ ಸಮಾಜದ ಯುವತಿ ಮುಸ್ಲಿಮ್ ಯುವಕನ ಜೊತೆ ರಿಜಿಸ್ಟ್ರಾರ್ ವಿವಾಹ ಆಗಿದ್ದಳು. ಅದರ ವಿರುದ್ಧ ಸಂಘಪರಿವಾರದ ಕಾರ್ಯಕರ್ತರು ಲವ್ ಜಿಹಾದ್ ಎಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು, ಆದರೆ ಯುವತಿ ನಾನೇ ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಹೇಳಿದ್ದಳು.

ತಮ್ಮ ಸಮಾಜದ ಯಾರೇ ಮುಸ್ಲಿಮರ ಜೊತೆ ಮದುವೆಯಾದರೂ, ಆ ಕುಟುಂಬವನ್ನು ಸಮಾಜದಿಂದ ಹೊರಗಿಡೋದು, ದೇವಸ್ಥಾನ ಪ್ರವೇಶ ನಿಷೇಧ ಮಾಡೋದು ಎಂದು ಪತ್ರದಲ್ಲಿ ಬರೆಯಲಾಗಿದೆ. ಅಂತಹ ಕುಟುಂಬಕ್ಕೆ ಸಮಾಜದ ಯಾರು ಹೆಣ್ಣು ಕೊಡುವಂತಿಲ್ಲ. ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿಷೇಧ ಹೇರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಸರಕಾರಿ ಲೆಟರ್ ಹೆಡ್ ಅನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp