ವಿದ್ಯುತ್ ತಗುಲಿ ಬಾಲಕ ಸಾವು| KSEB ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು SDPI ಆಗ್ರಹ

Prasthutha|

ಮೀಯಪದವು: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೊಬ್ಬ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಇದಕ್ಕೆ ಕಾರಣರಾದ KSEB ವರ್ಕಾಡಿಯ ಅಧಿಕಾರಿಗಳ ವಿರುಧ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು SDPI ಮಂಜೇಶ್ಚರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಆಗ್ರಹಿಸಿದ್ದಾರೆ.

- Advertisement -

GLP ತಲೇಕಳ ಶಾಲೆಯ 4ನೇ ತರಗತಿ ವಿದ್ಯಾರ್ಥಿ, ಮೂಲತಃ ಮುರತ್ತಣೆ ಲಕ್ಷಂವೀಡ್ ಕಾಲನಿಯ ಸದಾಶಿವ ರೈ ಎಂಬವರ ಮಗ ಮೋಕ್ಷಿತ್ ರೈ ( 8 ವರ್ಷ) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಇದಕ್ಕೆ KSEB ವರ್ಕಾಡಿಯ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವರ್ಷಗಳ ಹಿಂದೆ ವರ್ಕಾಡಿಯಲ್ಲಿ 6 ಮಕ್ಕಳು ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟು ಇಡೀ ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದ್ದು ಮಕ್ಕಳನ್ನು ಕಳೆದುಕೊಂಡ ಆ ನತದೃಷ್ಟ ಕುಟುಂಬ ಇಂದಿಗೂ ಘಟನೆಯನ್ನು ನೆನೆದು ಕಣ್ಣೀರುಡುವಾಗ ಮತ್ತೆ ಅದೇ ಘಟನೆ ಮರುಕಳಿಸಿದ್ದು KSEB ಅಧಿಕಾರಿಗಳ ಬೇಜವಾಬ್ದಾರಿತನಕ್ಕಿರುವ ಸ್ಷಷ್ಟ ಉದಾಹರಣೆಯಾಗಿದೆ. ಮೃತಪಟ್ಟ ಬಾಲಕನ ಕುಟುಂಬಕ್ಕೆ ನಷ್ಟ ಪರಿಹಾರವನ್ನು ಕೂಡಲೇ ಹಸ್ತಾಂತರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಬಂಧಿಸಬೇಕೆಂದು ಅಶ್ರಫ್ ಒತ್ತಾಯಿಸಿದ್ದಾರೆ.

Join Whatsapp