SDPI ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಬೂತ್ ಜೋಡೋ ಹಾಗೂ ಬೃಹತ್ ಇಫ್ತಾರ್ ಸಂಗಮ

Prasthutha|

ಬೋಳಿಯಾರ್ : SDPI ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಬೂತ್ ಜೋಡೋ ಹಾಗೂ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮ ಬೋಳಿಯಾರ್ ಜಂಕ್ಷನ್ ನಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಅಶ್ರಫ್ ಮೋನು ರವರ ನೇತೃತ್ವದಲ್ಲಿ ನಡೆಯಿತು.

- Advertisement -

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಳ್ಳಾಲ ವಿಧಾನ ಸಭಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆಯವರು ಪ್ರಸಕ್ತ ಸನ್ನಿವೇಶದಲ್ಲಿ ಕುರಿತು ಹಾಗೂ SDPI ಪಕ್ಷದ ಅನಿವಾರ್ಯತೆಯ ಬಗ್ಗೆ ಬಹಳ ಸ್ಪಷ್ಟವಾಗಿ ವಿವರಿಸಿದರು.

ರಾಜ್ಯ ನಾಯಕರಾದ ಅತಾವುಲ್ಲ ಜೋಕಟ್ಟೆ ಹಾಗೂ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

- Advertisement -

ಈ ಸಂಧರ್ಭದಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಸದಸ್ಯರಾದ ಆರೀಫ್ ಕಾಪಿಕಾಡ್ ಕೊಣಾಜೆ ಬ್ಲಾಕ್ ಅಧ್ಯಕ್ಷರಾದ ಕಮರ್ ಮಲಾರ್, ಕಾರ್ಯದರ್ಶಿ ಜಾಫರ್ ಪಾನೇಳ, ಉಪಾಧ್ಯಕ್ಷರಾದ ಶರೀಫ್ ರಂತಡ್ಕ, ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರಂತಡ್ಕ, ಸಮಿತಿ ಸದಸ್ಯರಾದ ರಹಿಮಾನ್ ಬೋಳಿಯಾರ್, ಸಾಮಾಜಿಕ ನೇತಾರರಾದ ಉಮರಬ್ಬ ಅಮ್ಮೆಂಬಳ, ಇಕ್ಬಾಲ್ ಅಮ್ಮೆಂಬಳ, ಕರೀಮ್ ಪಲ್ಲ , ಶರೀಫ್ ಮದಕ, ಪೀಟರ್ ರೋಡ್ರಿಗಸ್ ಹಾಗೂ ಸಂತೋಷ್ ಡಿ’ಸೋಜ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಇರ್ಫಾನ್ ರಂತಡ್ಕ ನಿರೂಪಿಸಿದರು. ಕಬೀರ್ ರಂತಡ್ಕ ವಂದಿಸಿದರು.

Join Whatsapp