ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹ ಪತ್ತೆ ಪ್ರಕರಣ: ಅತ್ಯಾಚಾರ ನಡೆಸಿ ಕೊಲೆ ಎಂದ ಕುಟುಂಬಸ್ಥರು; ಆರೋಪಿಗಳು ವಶಕ್ಕೆ

Prasthutha|

ಲಕ್ನೋ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಪ್ರಾಪ್ತ ದಲಿತ ಸಹೋದರಿಯರ ಸಾವು ಪ್ರಕರಣವು ತಿರುವು ಪಡೆದುಕೊಂಡಿದ್ದು, ಇದು ಅತ್ಯಾಚಾರ ನಡೆಸಿ ಮಾಡಿದ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ಲಖಿಂಪುರ್ ಖೇರಿಯಲ್ಲಿ ಬುಧವಾರ ಅಪ್ರಾಪ್ತ ದಲಿತ ಬಾಲಕಿಯರಿಬ್ಬರ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಓರ್ವ ಸಂತ್ರಸ್ತ ಬಾಲಕಿಯರ ಊರಿನವನೇ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

- Advertisement -

ಆರೋಪಿಗಳು ಈ ಬಾಲಕಿಯರನ್ನು ಅಪಹರಿಸಿ ಬೈಕೊಂದರಲ್ಲಿ ಕೊಂಡು ಹೋಗಿದ್ದು, ಇದನ್ನು ತಡೆದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಬಾಲಕಿಯರ ತಾಯಿ ಆರೋಪಿಸಿದ್ದಾರೆ.

ಇದಾದ ಕೆಲವೇ ಗಂಟೆಗಳ ಬಳಿಕ ಬಾಲಕಿಯರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅತ್ಯಾಚಾರ ಬಳಿಕ ಮಾಡಲಾದ ಕೊಲೆ ಎಂದು ತಾಯಿ ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಅಪಹರಣ, ಕೊಲೆ, ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



Join Whatsapp