ಬೋಟ್ ದುರಂತ | ಮತ್ತೆ ಇಬ್ಬರ ಮೃತದೇಹ ಪತ್ತೆ | ಇನ್ನಿಬ್ಬರಿಗಾಗಿ ಮುಂದುವರಿದಿದೆ ಶೋಧ

Prasthutha|

ಮಂಗಳೂರು : ಮೀನುಗಾರಿಕಾ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮಂದಿಯ ಪೈಕಿ, ಮತ್ತಿಬ್ಬರ ಮೃತದೇಹ ಇಂದು ಪತ್ತೆಯಾಗಿದ್ದು, ಇಲ್ಲಿವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿವೆ.

- Advertisement -

ಇಂದು ಪತ್ತೆಯಾದವರನ್ನು ಚಿಂತನ್ ಮತ್ತು ಹಸೈನಾರ್ ಎಂದು ಗುರುತಿಸಲಾಗಿದೆ. ಇನ್ನೂ ಪತ್ತೆಯಾಗದ ಅನ್ಸಾರ್ ಮತ್ತು ಝಿಯಾವುಲ್ಲಾಗೆ ಶೋಧ ಕಾರ್ಯ ಮುಂದುವರಿದಿದೆ.

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಉಳ್ಳಾಲ ಮೂಲಕ ಶ್ರೀ ರಕ್ಷಾ ಬೋಟ್ ಸೋಮವಾರ ಸಮುದ್ರದಲ್ಲಿ ದುರಂತಕ್ಕೀಡಾಗಿತ್ತು. ಬೋಟ್ ನಲ್ಲಿದ್ದ 22 ಮಂದಿಯಲ್ಲಿ 16 ಮಂದಿ ಪಾರಾಗಿದ್ದರು. ಆರು ಮಂದಿಯ ಪತ್ತೆಗಾಗಿ ಕಾರ್ಯ ಮುಂದುವರೆದಿತ್ತು. ನಿನ್ನೆ ಇಬ್ಬರ ಮೃತದೇಹ ಮಾತ್ರ ಪತ್ತೆಯಾಗಿತ್ತು. ಹೀಗಾಗಿ ಆಕ್ರೋಶಗೊಂಡಿದ್ದ ಮೀನುಗಾರರು ಮಧ್ಯರಾತ್ರಿ ಪ್ರತಿಭಟನೆ ನಡೆಸಿದ್ದರು.  

Join Whatsapp