ಉಡುಪಿ | ಮೀನುಗಾರಿಕೆಗೆ ತೆರಳಿದ್ದ ದೋಣಿ ಅಪಘಾತ: ಆರು ಮಂದಿ ಮೀನುಗಾರರ ರಕ್ಷಣೆ

Prasthutha|

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಶ್ರೀ ಮಹಾದೇವಿ 370 ಹೆಸರಿನ ದೋಣಿಯು ಮಗುಚಿ ಬಿದಿದ್ದು,  ಎಲ್ಲಾ ಆರು ಮೀನುಗಾರರನ್ನು ರಕ್ಷಿಸಲಾಗಿದೆ.

- Advertisement -

ಜನವರಿ 24 ರಂದು ಬೆಳಿಗ್ಗೆ 9 ಗಂಟೆಗೆ ದೋಣಿ ಮಲ್ಪೆ ಬಂದರಿನಿಂದ ಹೊರಟಿದ್ದು, ದಡದಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ದೋಣಿಯ ಕೆಳಭಾಗಕ್ಕೆ ಬಲವಾಗಿ ಏನೋ ಬಡಿದ ಪರಿಣಾಮವಾಗಿ ದೋಣಿಯು ಮಗುಚಿ ಬಿದ್ದಿದೆ.

ಬೋಟ್‌ ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಾಮದೂತ್ ಬೋಟ್ ಮೂಲಕ ಮಲ್ಪೆ ಬಂದರಿಗೆ ಕರೆತರಲಾಯಿತು.

- Advertisement -

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp