UAE ರಾಷ್ಟ್ರೀಯ ದಿನಾಚರಣೆ | ರಕ್ತದಾನ ಶಿಬಿರ ಏರ್ಪಡಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ

Prasthutha|

ದುಬೈ : UAE ರಾಷ್ಟ್ರೀಯ ದಿನಾಚರಣೆಯ ‌ ಅಂಗವಾಗಿ ಅಬುಧಾಬಿ ಖಾಲಿದಿಯ ಬ್ಲಡ್ ಬ್ಯಾಂಕ್ ನಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ‌ದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೇರ್ ಶಾ ಮತ್ತು ಅವರ ಪತ್ನಿ ಡಾ. ನಾಝ್ ಆಗಮಿಸಿದ್ದರು.

- Advertisement -

ನಂತರ ಮಾತನಾಡಿದ ಶೇರ್ ಶಾ ಈ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ನ್ನಷ್ಟು ನಡೆಸುವಂತೆ ಸಲಹೆ ನೀಡಿದರು. ರಾಜ್ಯದ ಸಂಸ್ಕೃತಿ, ಅಭಿರುಚಿ ಅರಿಯಲು ಭಾಷೆಯ ಅಗತ್ಯತೆ ವಿವರಿಸಿ ಸಮಯ ಹೊಂದಿಸಿ ಅರಬಿ ಹಾಗೂ ಇನ್ನಿತರ ಭಾಷೆಯನ್ನು ಕಲಿಯಬೇಕು ಎಂದು ಹೇಳಿದರು. ಶಿಬಿರದಲ್ಲಿ ರಕ್ತದಾನ ಮಾಡಿದ ಯುವಕರನ್ನು ಅಭಿನಂದಿಸಿದರು

ಅತಿಥಿಗಳಾಗಿ ಆಗಮಿಸಿದ್ದ ಶೇರ್ ಶಾ, ಡಾ. ನಾಝ್ ಮತ್ತು ಡಾ. ರಿತೇಶ್ ಅವರಿಗೆ ” ನೆನೆಪಿನ ಕಾಣಿಕೆ ” ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ಬಾಲ್ ಪಾಂಡೇಶ್ವರ ವಹಿಸಿದ್ದರು . ಯಾಹ್ಯ ಕೊಡ್ಲಿಪೇಟೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Join Whatsapp