ಬಿಜೆಪಿಯ ಆಶ್ವಾಸನೆಗಳು ಎಂದೂ ಈಡೇರುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

Prasthutha|

ಚಂಡೀಗಢ: ಚುನಾವಣೆ ಹೊತ್ತಿನಲ್ಲಿ ಬಿಜೆಪಿ ನೀಡುವ ಆಶ್ವಾಸನೆಗಳು ಎಂದಿಗೂ ಈಡೇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement -


ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ‘ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಮಹಾತ್ಮ ಗಾಂಧಿ ನಮಗೆ ಸತ್ಯ ಮತ್ತು ಅಹಿಂಸೆಯನ್ನು ಬೋಧಿಸಿದ್ದಾರೆ. ಇದನ್ನು ಹೇಳಬೇಕೆಂದೆನಿಸುತ್ತಿಲ್ಲ, ಆದರೆ, ಅಧಿಕಾರದಲ್ಲಿ ಇರುವವರು ಎಷ್ಟು ಸತ್ಯ ನುಡಿಯುತ್ತಾರೆ, ಎಷ್ಟೆಲ್ಲಾ ಸುಳ್ಳು ಹೇಳುತ್ತಾರೆ’ ಎಂದು ಕೇಳಿದ್ದಾರೆ.


‘ಯಾರೆಲ್ಲ ನಂಬಿಕೆ ಹುಸಿಗೊಳಿಸಿದ್ದಾರೋ, ಅವರಿಗೆಲ್ಲ ಮೋದಿ ನಾಯಕ. ಅವರ ಅನೇಕ ಸುಳ್ಳುಗಳು, ಆಶ್ವಾಸನೆಗಳ ಬಗ್ಗೆ ನಿಮಗೆ ಗೊತ್ತಿದೆ’ ಎಂದಿದ್ದಾರೆ. ಈ ವೇಳೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೂ ಇದ್ದರು.
ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದಾರೆ. ‘ಅವುಗಳಿಗೆ ಮಿತಿಯೇ ಇಲ್ಲ’ ಎಂದು ಖರ್ಗೆ ತಿವಿದಿದ್ದಾರೆ.



Join Whatsapp