ಬಿಜೆಪಿಯ ಮನುವಾದಿಗಳಿಗೆ ಹಿಂದುಳಿದವರನ್ನು ಕಂಡರೆ ಕೆಂಡದಂತಹ ಕೋಪ ಬರುತ್ತೆ: ಎಂ.ಬಿ ಪಾಟೀಲ್

Prasthutha|

ಬೆಂಗಳೂರು: ಮಡಿಕೇರಿ ಪ್ರವಾಸದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಬಿಜೆಪಿಯ ಮನುವಾದಿಗಳಿಗೆ ಶೂದ್ರರು ಮತ್ತು ಹಿಂದುಳಿದ ವರ್ಗದವರನ್ನು‌ ಕಂಡರೆ ಕೆಂಡದಂತಹ ಕೋಪ ಬರುತ್ತೆ ಎಂದು ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

- Advertisement -

ಬಿಜೆಪಿ ಕಾರ್ಯಕರ್ತರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಎಂ.ಬಿ.ಪಾಟೀಲ್, ಬಿಜೆಪಿಯ ಮನುವಾದಿಗಳಿಗೆ ಶೂದ್ರರು-ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಇದೇ ಸಾಕ್ಷಿ. ಶ್ರೀ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗುತ್ತಿಲ್ಲವೇ?
ಎಂದು ಪ್ರಶ್ನಿಸಿದ್ದಾರೆ.

ಹೀನ ಕೃತ್ಯಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಜೆಪಿಗರು ತೋರಿದ್ದಾರೆ!
ಬಸವಣ್ಣ-ಸಂಗೊಳ್ಳಿರಾಯಣ್ಣ-ದಾಸ ಶ್ರೇಷ್ಠರನ್ನು ಕಂಡಂತಹ ಈ ನಾಡಿನಲ್ಲಿ ನಿಮ್ಮ ಕುತಂತ್ರಗಳು ನಡೆಯದು ಎಂದು ಪಾಟೀಲ್ ತಿಳಿಸಿದರು.

Join Whatsapp