ಬಿಜೆಪಿಯ ದ್ವೇಷಪೂರಿತ ರಾಜಕಾರಣ ದೇಶಕ್ಕೆ ಅಪಾಯಕಾರಿ: ರಾಹುಲ್ ಗಾಂಧಿ

Prasthutha|

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ದ್ವೇಷಪೂರಿತ ರಾಜಕಾರಣವು ದೇಶಕ್ಕೆ ಅಪಾಯಕಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯ ದ್ವೇಷ ರಾಜಕಾರಣ ದೇಶಕ್ಕೆ ಬಹಳ ಅಪಾಯಕಾರಿ ಎಂದು ನಾನು ಕೂಡ ನಂಬುತ್ತೇನೆ. ಈ ದ್ವೇಷವು ನಿರುದ್ಯೋಗಕ್ಕೂ ಕಾರಣವಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸದಿದ್ದರೆ ದೇಶ ಹಾಗೂ ವಿದೇಶಿ ಕೈಗಾರಿಕೆಗಳು ನಡೆಯಲಾರವು. ಪ್ರತಿದಿನ ನಿಮ್ಮ ಸುತ್ತ ಬೆಳೆಯುತ್ತಿರುವ ಈ ದ್ವೇಷವನ್ನು ಸಹೋದರತ್ವದಿಂದ ಸೋಲಿಸಬಹುದು. ನೀವು ನನ್ನೊಂದಿಗೆ ಇದ್ದೀರಾ?’ ಎಂದು ಕೇಳಿದ್ದಾರೆ.

ಬಿಜೆಪಿ ಸರ್ಕಾರದ ಅತಿ ದೊಡ್ಡ ಕುಂದು ಕೊರತೆ ಏನು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಇದಕ್ಕೆ ‘ನಿರುದ್ಯೋಗ’, ‘ತೆರಿಗೆ ಸುಲಿಗೆ’, ‘ಬೆಲೆ ಏರಿಕೆ’ ಮತ್ತು ‘ದ್ವೇಷದ ವಾತಾವರಣ’ ಎಂಬ ನಾಲ್ಕು ಆಯ್ಕೆಗಳನ್ನು ನೀಡಿದ್ದಾರೆ.

- Advertisement -

ಈ ಪೈಕಿ ಅತಿ ಹೆಚ್ಚು ಶೇ 35ರಷ್ಟು ಮಂದಿ ದ್ವೇಷದ ವಾತಾವರಣ ಎಂದು ಉತ್ತರಿಸಿದ್ದಾರೆ. ನಿರುದ್ಯೋಗ ಶೇ 28, ಬೆಲೆ ಏರಿಕೆ ಶೇ 19.8 ಹಾಗೂ ತೆರಿಗೆ ವಸೂಲಿ ಎಂದು ಶೇ 17.2 ಮಂದಿ ಪ್ರತಿಕ್ರಿಯಿಸಿದ್ದಾರೆ.

Join Whatsapp