ಚುನಾವಣೆ ನ್ಯಾಯಸಮ್ಮತವಾಗಿದ್ದರೆ ಬಿಜೆಪಿ ಅಧಿಕಾರ ಉಳಿಯಲ್ಲ: ಮಾಯಾವತಿ

Prasthutha|

ಹರ್ದೋಯ್: ಲೋಕಸಭೆ ಚುನಾವಣೆಯು ಮುಕ್ತವಾಗಿ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆದರೆ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

- Advertisement -


ಉತ್ತರ ಪ್ರದೇಶದ ಹರ್ದೋಯ್ ಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ ‘ಈ ಬಾರಿ ಬಿಜೆಪಿಯ ನಾಟಕ ಮತ್ತು ಮಾತುಗಳು ಕೆಲಸ ಮಾಡುತ್ತಿಲ್ಲ. ಏಕೆಂದರೆ ಬಿಜೆಪಿಯು ತಾನು ಜನರಿಗೆ ನೀಡಿದ ಭರವಸೆಗಳಲ್ಲಿ ನಾಲ್ಕನೇ ಒಂದು ಭಾಗದಷ್ಟೂ ಈಡೇರಿಸಿಲ್ಲ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಜನರು ಬಿಜೆಪಿಯ ಪೊಳ್ಳು ಭರವಸೆಗಳನ್ನು ನೋಡಿದ್ದಾರೆ’ ಎಂದು ಕಿಡಿಕಾರಿದರು.

Join Whatsapp