ಮೋದಿ ನೇತೃತ್ವದಲ್ಲಿ ಬಿಜೆಪಿ ಟೈಟಾನಿಕ್ ರೀತಿ ಶಾಶ್ವತವಾಗಿ ಮುಳುಗಲಿದೆ: ಸುಬ್ರಮಣಿಯನ್ ಸ್ವಾಮಿ

Prasthutha|

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಭವಿಷ್ಯ ನುಡಿದಿದ್ದಾರೆ.

- Advertisement -


ವಿವಿಧ ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಎಕ್ಸ್/ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ವಾಮಿ, ‘ಬಿಜೆಪಿಯಲ್ಲಿರುವ ನಾವು ನಮ್ಮ ಪಕ್ಷ ಟೈಟಾನಿಕ್ ಹಡಗು ಮುಳುಗಿದಂತೆ ಮುಳುವುದನ್ನು ನೋಡಲು ಬಯಸುವುದಾದರೆ, ಅದರ ನೇತೃತ್ವವನ್ನು ಮೋದಿ ಅವರೇ ವಹಿಸುವುದು ಉತ್ತಮ. ಶಾಶ್ವತವಾಗಿ ಮುಳುಗಲಿರುವ ಬಿಜೆಪಿಯಲ್ಲಿ ಬಿರುಕು ಮೂಡಿದೆ ಎಂಬುದನ್ನು ಉಪ ಚುನಾವಣೆ ಫಲಿತಾಂಶ ತೋರಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.


7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಫಲಿತಾಂಶ ಜುಲೈ 13ರಂದು ಪ್ರಕಟವಾಗಿದೆ.



Join Whatsapp