ಬಿಜೆಪಿಗರಿಗೆ ಜೈಲಿಗೆ ಹೋಗಲು ಆಸೆ ಇದೆ, ಕಳಿಸ್ತೀವಿ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಬಿಜೆಪಿಗರಿಗೆ ಒಳಗೆ ( ಜೈಲು) ಹೋಗಲು ಆಸೆ ಇದೆ ಅಲ್ವೇ! ಕಳಿಸ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧದ ಹಗರಣಗಳ ಆರೋಪದ ತನಿಖೆ ಪ್ರಗತಿಯಲ್ಲಿದ್ದು, ಕಾನೂನು ಪ್ರಕ್ರಿಯೆ ಕೊಂಚ ವಿಳಂಬ ಆದರೂ ನ್ಯಾಯ ನಿರಾಕರಣೆ ಆಗುವುದಿಲ್ಲ ಎಂದರು.


ಬಿಜೆಪಿ ನಾಯಕರು ಕ್ಯಾಮರಾ ಮುಂದೆ ಬಂದಾಗ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಾರೆ. ಆದರೆ ಕಾನೂನು ಪ್ರಕಾರ ಯಾರೂ ಮಾತನಾಡ್ತಿಲ್ಲ. ಸಿದ್ದರಾಮಯ್ಯ ತಪ್ಪು ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಅಮವಾಸ್ಯೆ, ದಸರಾ, ದೀಪಾವಳಿ ಬಳಿಕ ರಾಜೀನಾಮೆ ಎನ್ನುತ್ತಾರೆ. ಬಿಜೆಪಿಗರು ನೈತಿಕತೆ, ಮಾರಲ್ ಗ್ರೌಂಡ್ ಎಂಬಿತ್ಯಾದಿ ಪದಗಳನ್ನು ಕಲಿತುಕೊಂಡಿದ್ದಾರೆ. ನೈತಿಕತೆ ಬಗ್ಗೆ ಮಾತನಾಡುವುದಾದರೆ ಬಿವೈ ವಿಜಯೇಂದ್ರ ಮೊದಲು ರಾಜೀನಾಮೆ ಕೊಡಬೇಕು ಎಂದರು.



Join Whatsapp