ಅತ್ಯಾಚಾರಿಗಳಿಗೆ ಬಿಜೆಪಿ ಬೆಂಬಲ | ಮಹಿಳೆಯರ ಬಗ್ಗೆ ಬಿಜೆಪಿಗೆ ಇರುವ ಕ್ಷುಲ್ಲಕ ಮನಃಸ್ಥಿತಿ ತೋರಿಸುತ್ತದೆ: ಕಾಂಗ್ರೆಸ್

Prasthutha|

ಬೆಂಗಳೂರು: ಅತ್ಯಾಚಾರಿಗಳು ತಮ್ತು ಅಪರಾಧಿಗಳಿಗೆ ಬಿಜೆಪಿ ನೀಡುತ್ತಿರುವ ಬೆಂಬಲ ಆ ಪಕ್ಷಕ್ಕೆ ಮಹಿಳೆಯರ ಬಗ್ಗೆ ಇರುವ ಕ್ಷುಲ್ಲಕ ಮನಃಸ್ಥಿತಿ ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -


ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಉನ್ನಾವೋ – ಬಿಜೆಪಿ ಶಾಸಕರ ರಕ್ಷಣೆಗೆ ನಿಂತಿತು
ಕಥುವಾ – ಅತ್ಯಾಚಾರಿಗಳನ್ನು ಬೆಂಬಲಿಸಿ ರ್ಯಾ ಲಿ
ಹತ್ರಾಸ್ – ಅತ್ಯಾಚಾರಿಗಳ ಪರ ನಿಂತ ಸರ್ಕಾರ
ಗುಜರಾತ್ – ಅತ್ಯಾಚಾರಿಗಳ ಬಿಡುಗಡೆ
ಅಪರಾಧಿಗಳ ಪರ ಈ ಬೆಂಬಲ, ಮಹಿಳೆಯರ ಬಗ್ಗೆ ಬಿಜೆಪಿಗೆ ಇರುವ ಕ್ಷುಲ್ಲಕ ಮನಃಸ್ಥಿತಿ ತೋರಿಸುತ್ತದೆ. ಇಂತಹ ರಾಜಕಾರಣದಿಂದ ನಾಚಿಕೆಯಾಗುವುದಿಲ್ಲವೇ ಪ್ರಧಾನಿಗಳೇ? ಎಂದು ಪ್ರಶ್ನಿಸಿದರು.
40% ಸರ್ಕಾರದ ಮ್ಯಾನೇಜ್ಮೆಂಟ್ ಆಡಳಿತಕ್ಕೆ ಬಿಜೆಪಿಯಲ್ಲೇ ಅಷ್ಠ ದಿಕ್ಕುಗಳಿಂದಲೂ ಅಸಹನೆ, ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರ್ಯಕರ್ತರ ರಾಜೀನಾಮೆ
ABVP ದಾಳಿ
ರಾಯಚೂರು ಬಿಜೆಪಿ ಶಾಸಕರ ಅಸಮಾಧಾನ
ಮಾಧುಸ್ವಾಮಿಯವರ ಅಸಹಾಯಕತೆ
ಸೊಗಡು ಶಿವಣ್ಣರ ಅಸಹನೆ
ಸುರೇಶ್ ಗೌಡರ ಹೇಳಿಕೆ
ಇವು ಬಿಜೆಪಿ ಸರ್ಕಾರದ ವಿಫಲ ಆಡಳಿತಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರ ಹೇಳಿಕೆಯ ಆಧಾರದಲ್ಲಿ ತೆಲಂಗಾಣದ ಸಿಎಂ ‘ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ’ ಎಂದಿದ್ದಾರೆ. ಬೊಮ್ಮಾಯಿಯವರೇ, ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ?
ನಿಮ್ಮ ಈ ‘ಮೌನ’ ಸಮ್ಮತಿಯ ಲಕ್ಷಣವೇ? ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ? ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ? ಎಂದು ಕಾಂಗ್ರೆಸ್ ಕುಟುಕಿದೆ.



Join Whatsapp