ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಕೋಮುಗಲಭೆ ನಡೆದಿಲ್ಲ, ಅಧಿಕಾರಕ್ಕೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್: ರೇಣುಕಾಚಾರ್ಯ

Prasthutha|

ತುಮಕೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದುವರೆಗೂ ಒಂದೇ ಒಂದು ಕೋಮುಗಲಭೆ ನಡೆದಿಲ್ಲ . ಅಧಿಕಾರಕ್ಕೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್​. ನಮ್ಮದು ದೀಪ ಹಚ್ಚೋ ಸಂಸ್ಕೃತಿ. ಕಾಂಗ್ರೆಸ್​ನವರದ್ದು ಕೊಳ್ಳಿ ಇಡೋ ಸಂಸ್ಕೃತಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಸಂಘ ಪರಿವಾರ ಹಿಂದುತ್ವ, ದೇಶದ ಸಂಸ್ಕೃತಿಯನ್ನ ಉಳಿಸುವಂತ ಕಾರ್ಯ ಮಾಡುತ್ತಿವೆ. ದೇಶಲ್ಲಿ ಎಲ್ಲೇ ವಿಪತ್ತು ಬಂದರೆ ಮೊದಲು ಎದೆ ಕೊಟ್ಟು ನಿಲ್ಲುವುದೇ ಸಂಘ ಪರಿವಾರ. ಐಎಎಸ್, ಕೆಎಎಸ್ ಮಾಡೋರಿಗೆ ಆರ್ ​ಎಸ್‌ ಎಸ್​ನಿಂದ ಇನ್​ಫ್ಲೂಯೆನ್ಸ್ ಮಾಡೋಕಾಗುತ್ತಾ ಅವರವರ ಅರ್ಹತೆ, ಅಂಕಗಳ ಮೇಲೆ ಅವಕಾಶ ಸಿಗುತ್ತೆ ಎಂದು ಹೇಳಿದ್ದಾರೆ.



Join Whatsapp