ಬಿಜೆಪಿಗೆ ಸಾವರ್ಕರ್ ಅಥವಾ ಗಾಂಧಿ ಬಗ್ಗೆ ಏನೂ ಗೊತ್ತಿಲ್ಲ: ಉದ್ಧವ್ ಠಾಕ್ರೆ

Prasthutha|

ಮುಂಬೈ: ಬಿಜೆಪಿಗೆ ಮಹಾತ್ಮಾ ಗಾಂಧಿ ಅಥವಾ ಸಾವರ್ಕರ್ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

ಮಹಾತ್ಮ ಗಾಂಧಿ ಅವರ ಸೂಚನೆ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಪತ್ರ ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ಠಾಕ್ರೆ ಪರೋಕ್ಷವಾಗಿ ಉಲ್ಲೇಖಿಸಿದ್ದರು. ಶಿವಸೇನೆಯನ್ನು ಭ್ರಷ್ಟ ಪಕ್ಷ ಎಂದು ದೂರಿದ್ದಕ್ಕೆ ಬಿಜೆಪಿಯನ್ನು ಟೀಕಿಸಿದ್ದಾರೆ.

ಶಿವಸೇನೆಯ ವಾರ್ಷಿಕ ದಸರಾದಲ್ಲಿ ಮಾತನಾಡಿದ ಅವರು, ವಿಶ್ವದ ಅತಿದೊಡ್ಡ ಪಕ್ಷಕ್ಕೆ ಸ್ವಂತದ ಅಭ್ಯರ್ಥಿಗಳೂ ಸಿಗುತ್ತಿಲ್ಲ. ಬೇರೆ ಪಕ್ಷಗಳಿಂದ ಅವರು ಅಭ್ಯರ್ಥಿಗಳನ್ನು ಹುಡುಕಿ ಹೆಕ್ಕುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.

Join Whatsapp