ಪ್ರವಾದಿ ನಿಂದನೆಯ ಎಫೆಕ್ಟ್: ಕೇಸರಿ ತೊರೆದು ನೀಲಿ-ಬಿಳಿ ಬಣ್ಣದ ಮೊರೆಹೋದ ಬಿಜೆಪಿ

Prasthutha|

ನವದೆಹಲಿ: ಪಕ್ಷದ ಮಾಜಿ ವಕ್ತಾರೆಯ ಪ್ರವಾದಿ ವಿರುದ್ಧ ನಿಂದನೆಯು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ತೀವ್ರ ಪ್ರತಿಭಟನೆ ನಡೆಯುತ್ತಿರುವ ನಡುವೆ ದೆಹಲಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಮುಖ್ಯ ವೇದಿಕೆಯಲ್ಲಿ ಕೇಸರಿಯ ಬದಲಿಗೆ ನೀಲಿ-ಬಿಳಿ ಬಣ್ಣದ ಮೊರೆಹೋಗಿದೆ.

- Advertisement -

ಸದಾ ಧ್ರುವೀಕರಣದ ಲಾಭವನ್ನು ಪಡೆಯುತ್ತಿದ್ದ ಬಿಜೆಪಿ, ಪ್ರವಾದಿ ವಿರುದ್ಧದ ಹೇಳಿಕೆಯನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮತ್ತು ಜಾಗತಿಕವಾಗಿ ಭಾರತದ ವಿರುದ್ಧ ಅಕ್ರೋಶ ವ್ಯಕ್ತವಾಗುತ್ತಿರುವಾಗ ಬಿಜೆಪಿಯ ಸಭೆಯ ಕಾರ್ಯಕ್ರಮದಲ್ಲಿ ಕೇಸರಿ ಬದಲು ನೀಲಿ-ಬಿಳಿ ಬಣ್ಣಕ್ಕೆ ಮೊರೆಹೋಗಿ ಸಮಸ್ಯೆಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.

ಗುಜರಾತಿನಿಂದ ಕಾರ್ಯಕ್ರಮದಲ್ಲಿ ವಿನ್ಯಾಸಗೊಳಿಸಿದ ಟೋಪಿ ಧರಿಸಿರುವುದು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷಗಳ ಪೋಸ್ಟರ್’ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪೋಸ್ಟರ್’ಗಳು ಕೇಸರಿ ಬದಲಿಗೆ ನೀಲಿ ಬಣ್ಣಕ್ಕೆ ಬಿಜೆಪಿ ಪಕ್ಷಕ್ಕೆ ಬದಲಾಯಿಸಿದೆ.

- Advertisement -

ಪ್ರವಾದಿ ಮುಹಮ್ಮದ್ ವಿರುದ್ಧದ ಮಾಜಿ ವಕ್ತಾರೆಯ ಹೇಳಿಕೆಯು ದೇಶಾದ್ಯಂತ ತೀವ್ರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಸರಿ ಬಣ್ಣವನ್ನು ದೂರವಿಡಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿವೆ.

Join Whatsapp