ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚರಿಸುತ್ತಿದ್ದ ದೋಣಿ ಸೇತುವೆಗೆ ಡಿಕ್ಕಿ; ಅಪಾಯದಿಂದ ಪಾರು

Prasthutha|

ಪಾಟ್ನಾ: ಗಂಗಾ ನದಿಯ ದಡದಲ್ಲಿರುವ ಛತ್ ಫಾಟ್ ಅನ್ನು ಪರಿಶೀಲಿಸಲು ಹೋಗಿದ್ದ  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿದ್ದ ಸ್ಟೀಮರ್ ದೋಣಿ ಕೆಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಜೆಪಿ ಸೇತುವೆಯ ಪಿಲ್ಲರ್ ಗೆ ಡಿಕ್ಕಿ ಹೊಡೆದಿದ್ದು, ಮುಖ್ಯಮಂತ್ರಿ ಹಾಗೂ ಸಹ ಯಾತ್ರಿಕರು ಅಪಾಯದಿಂದ ಪಾರಾಗಿದ್ದಾರೆ.

- Advertisement -

ಸ್ಟೀಮರ್ ಡಿಕ್ಕಿ ಹೊಡೆದ  ತಕ್ಷಣವೇ ಮುಖ್ಯಮಂತ್ರಿ ಮತ್ತು ಇತರರನ್ನು ಸುರಕ್ಷಿತವಾಗಿ ಮತ್ತೊಂದು ಸ್ಟೀಮರ್‌ಗೆ ಸ್ಥಳಾಂತರಿಸಿದ ಬಳಿಕ ಪರಿಶೀಲನೆಯನ್ನು ಮುಂದುವರಿಸಲಾಗಿದೆ. ದೋಣಿಗೆ ಯಾವುದೇ ಗಮನಾರ್ಹ ರೀತಿಯಲ್ಲಿ ಹಾನಿಯಾಗಿಲ್ಲ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.

ರಾಜ್ಯದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಛತ್ ಪೂಜೆಯನ್ನು ಗಮನದಲ್ಲಿಟ್ಟುಕೊಂಡು ನಿತೀಶ್ ಕುಮಾರ್ ಪರಿಶೀಲಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

Join Whatsapp