ಭದ್ರಾವತಿ: ಮಣಿಪುರ, ಹರ್ಯಾಣ ಹಿಂಸಾಚಾರ ಸೇರಿದಂತೆ ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸಿ SDPI ಪ್ರತಿಭಟನೆ

Prasthutha|

ಭದ್ರಾವತಿ: SDPI ಭದ್ರಾವತಿ ತಾಲ್ಲೂಕು ಸಮಿತಿ ವತಿಯಿಂದ ಮುಂಬೈ ರೈಲಿನಲ್ಲಿ RPF ಯೋಧ ನಡೆಸಿದ ಬರ್ಬರ ಹತ್ಯೆ, ಹರ್ಯಾಣದಲ್ಲಿ ನಡೆಸುತ್ತಿರುವ ಮುಸ್ಲಿಮರ ಮೇಲೆ ಹಿಂಸಾಚಾರ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ನಡೆಸುತ್ತಿರುವ ಹಿಂಸಾಚಾರ ಸೇರಿದಂತೆ ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸಿ ಭದ್ರಾವತಿ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

- Advertisement -

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಹಾಗೂ ಬಿಜಾಪುರದಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Join Whatsapp