ಬೆಂಗಳೂರಿನ ಬೇಲೂರು, ಅಂಬೇಡ್ಕರ್ ನಗರ ಸ್ಲಂ ತೆರವು ವಿರೋಧಿಸಿ ಆರ್ ಪಿ ಐ ನಿಂದ ಪ್ರತಿಭಟನೆ

Prasthutha|

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಯಮಲೂರು ವ್ಯಾಪ್ತಿಯ ಬೇಲೂರು, ಅಂಬೇಡ್ಕರ್ ನಗರ ಕೊಳಗೇರಿ ನಿವಾಸಿಗಳನ್ನು ತೆರವುಗೊಳಿಸದಂತೆ ಇಂದು ಸಮತಾ ಸೈನಿಕ ದಳ, ಆರ್ ಪಿ ಐ ನೇತೃತ್ವದಲ್ಲಿ ನೂರಾರು ನಿವಾಸಿಗಳು ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

- Advertisement -


ಬಳಿಕ ಮಾತನಾಡಿದ ಆರ್.ಪಿ.ಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟ ಸ್ವಾಮಿ, ಬೆಂಗಳೂರು ನಗರದ ಮಹದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿನ ಸರ್ಕಾರಿ ಭೂಮಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ಬೇಲೂರು, ಅಂಬೇಡ್ಕರ್ ನಗರ ಕೊಳೆಗೇರಿ ಮನೆಗಳನ್ನು ತೆರವುಗೊಳಿಸಲು 2019ರಿಂದ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ಕಾರ್ಯಾಚರಣೆ ವಿರುದ್ದ 2019ರಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು ಎಂದು ತಿಳಿಸಿದರು.


ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಫರ್ ವಲಯದಲ್ಲಿ ಇದೆ ಎಂದು ವರದಿ ನೀಡಿ ತೆರವುಗೊಳಿಸಲು ಮುಂದಾಗಿರುವುದು ಸುಳ್ಳಾಗಿದೆ. ಇದೇ ತಿಂಗಳ 31ರಂದು ನ್ಯಾಯಾಲಯದ ಆದೇಶ ಹೊರಬೀಳಲಿದ್ದು. ಬೋರ್ಡ್ ನ ಆಯುಕ್ತರು ಈ ಕುರಿತು ಸತ್ಯಾ ಸತ್ಯತೆಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ ತೆರವುಗೊಳಿಸದಂತೆ ಕ್ರಮ ಕೈ ಗೊಳ್ಳಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಚಂದ್ರ ಶೇಖರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Join Whatsapp