ಬುದ್ಧದೇವ್ ಭಟ್ಟಾಚಾರ್ಯ ಬೆನ್ನಿಗೇ ಬಂಗಾಳಿ ಹಿರಿಯ ಗಾಯಕಿಯಿಂದ ‘ಪದ್ಮಶ್ರೀ’ ನಿರಾಕರಣೆ!

Prasthutha|

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯುನಿಷ್ಟ್‌ ನಾಯಕ ಬುದ್ಧದೇವ್‌ ಭಟ್ಟಾಚಾರ್ಯ ‘ಪದ್ಮ ಭೂಷಣ’ ಪ್ರಶಸ್ತಿಯನ್ನು ನಿರಾಕರಿಸಿದ ಬೆನ್ನಿಗೆ ಬಂಗಾಳದ ಹಿರಿಯ ಗಾಯಕಿ ಕೂಡಾ ‘ಪದ್ಮಶ್ರೀ’ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

- Advertisement -

ಸುಮಾರು 8 ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಸಂಧ್ಯಾ ಮುಖರ್ಜಿ(90) ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

 “ತನಗಿಂತಲೂ ಕಿರಿಯ ಕಲಾವಿದರಿಗೆ ಇಂತಹಾ ಪ್ರಶಸ್ತಿ ನೀಡುವುದು ಸೂಕ್ತ” ಎಂದು ಅವರು ತಿಳಿಸಿದ್ದಾರೆ.

- Advertisement -

ಗಣರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಪದ್ಮಶ್ರೀ ಎಂದು ಹೆಸರಿಸಲು ಒಪ್ಪಿಗೆ ಕೋರಿ ದೆಹಲಿಯಿಂದ ಕರೆ ಮಾಡಿದ್ದ ಅಧಿಕಾರಿಗಳಿಗೆ, “ನಾನು ಪದ್ಮಶ್ರೀ ಪುರಸ್ಕೃತೆ ಎಂದು ಕರೆಯುವುದನ್ನು ಇಚ್ಛಿಸುವುದಿಲ್ಲ” ಎಂದು ತಾಯಿ ಹೇಳಿದ್ದಾಗಿ ಅವರ ಪುತ್ರಿ ಸೌಮಿ ಸೆಂಗುಪ್ತಾ ತಿಳಿಸಿದ್ದಾರೆ.

Join Whatsapp