ಬೆಳ್ವೆ|ಮದ್ರಸ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ

Prasthutha|

ಬೆಳ್ವೆ : ಹಿದಾಯತುಲ್ ಉಲೂಮ್ ಅರಬಿ ಮದ್ರಸ  ವಾರ್ಷಿಕೋತ್ಸವ 2023 ಹಾಗೂ ಸನ್ಮಾನ ಸಮಾರಂಭ ಮದ್ರಸ ಕಮಿಟಿ ಅದ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಇವರ  ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.

- Advertisement -

ಮದ್ರಸ ಸ್ಥಾಪಕ ಕಾರ್ಯದರ್ಶಿ ಕೃಷಿಕ  ಬಿ.ಕೆ.ಶಬ್ಬಿರ್ ಸಾಹೇಬ್ ಬೆಳ್ವೆ , ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಮದ್ರಸ ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ ಹೋನಕಲ್,  ಹಾಗೂ ಕೊಳವೆ ಬಾವಿ ದಾನಿ ಸಾಗರದ ಅಬೂಬಕರ್ ಸಾಹೇಬ್  ಸನ್ಮಾನಿಸಲಾಯಿತು.

ಮಕ್ಕಳಿಂದ ಇಸ್ಲಾಮಿಕ್ ಮನರಂಜನೆ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳಿಗೆ ಹಾಗೂ ಜಮಾಅತ್ ಭಾಂದವರಿಗೆ ಏರ್ಪಡಿಸಲಾದ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಉತ್ತಮ ಸಮಾಜ ಸೇವಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

- Advertisement -

ಶಾಂತಿ ಪ್ರಕಾಶನ ಮಂಗಳೂರು ಹೊರತಂದ ಮಕ್ಕಳನ್ನು ಹೇಗೆ ಬೆಳೆಸಬೇಕು  ಎಂಬ ಪುಸ್ತಕ ಬಿಡುಗಡೆ ಮಾಡಿ ಪೋಷಕರಿಗೆ ವಿತರಿಲಾಯಿತು. ವಿದ್ಯಾರ್ಥಿಗಳಿಗೆ ದೀನೀ ಪುಸ್ತಕ  ಹಾಗೂ ಪವಿತ್ರ ಗ್ರಂಥ  ಕುರ್ ಆನ್ ನೀಡಲಾಯಿತು.

ಬೆಳ್ವೆ ಜುಮ್ಮಾ ಮಸೀದಿ  ಅದ್ಯಕ್ಷ ಅಹಮದ್ ಬ್ಯಾರಿ, ಇಸ್ಲಾಮಿಕ್ ಯೂತ್ ಫೆಡರೇಷನ್  ಅದ್ಯಕ್ಷ  ಮುಹಮ್ಮದ್ ನಝೀರ್, ಬೆಳ್ವೆ ಜುಮ್ಮಾ  ಮಸೀದಿಯ ಖತೀಬ್, ಮದ್ರಸ ಸದರ್ ಮುಅಲ್ಲಿಂ   ಮೌಲಾನ  ಮುಹಮ್ಮದ್ ರಫೀಕ್ ಬೆಳ್ವೆ, ಮದ್ರಸ ಕಮಿಟಿ ಉಪಾಧ್ಯಕ್ಷರಾದ ಅಬ್ದುಲ್ಲಾ ಸಾಹೇಬ್ ಅಲ್ಬಾಡಿ,   ಬೆಳ್ವೆ  ಜಮಾತ್ ಉಪಾಧ್ಯಕ್ಷ ಶಕೀಲ್ ಅಹಮದ್,ಕಾರ್ಯದರ್ಶಿ ಇಕ್ಬಾಲ್,ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ಜೊತೆ ಕಾರ್ಯದರ್ಶಿ ಷರೀಫ್  ಬೆಳ್ವೆ ,ಮದ್ರಸ ಜೊತೆ ಕಾರ್ಯದರ್ಶಿ ಸಿದ್ದೀಕ್ ಹೊಂಕಲ್, ರಝಾಕ್  ಅಲ್ಬಾಡಿ, ಜಿಫ್ರಿ ಸಾಹೇಬ್, ಉಸ್ಮಾನ್ ಅಲ್ಬಾಡಿ, ಅನ್ವರ್ ಅಲ್ಬಾಡಿ, ಷಜದ್ ಬೆಳ್ವೆ, ಇಮ್ರಾನ್, ಮುದಾಸಿರ್,ಫಾರೂಕ್ ಬೆಳ್ವೆ, ಹನೀಫ್ ಬೆಳ್ವೆ, ಮೊದಲಾದವರು ಉಪಸ್ಥಿತರಿದ್ದರು.

 ಮುಹಮ್ಮದ್ ರಯನ್ ಕಾರ್ಯಕ್ರಮ ನಿರೂಪಿಸಿದರು ,ಮುಹಮ್ಮದ್ ಆಸಿಫ್ ಅಲ್ಬಾಡಿ ಸನ್ಮಾನ ಪತ್ರ ವಾಚಿಸಿದರು. ಅರಫಾತ್ ಅಲ್ಬಾಡಿ ಸ್ವಾಗತಿಸಿದರು.ಮುಹಮ್ಮದ್  ರಬೀ ವರದಿ ವಾಚಿಸಿದರು.  ಬೆಳ್ವೆ ಅಬ್ದುಲ್ ಶುಕೂರ್ ಸೌದಿ ಅರೇಬಿಯಾ ,ಸರ್ಫರಾಜ್ ಕುವೈಟ್,ಆಶಿರ್ ಬೆಂಗಳೂರ್ ,ಮಯ್ಯದ್ದಿ ಬಹರೈನ್, ಇಲ್ಯಾಸ್ ಬೆಳ್ವೆ ಹಸೈನಾರ್ ಬೆಳ್ವೆ ,ಅಕ್ಬರ್ ಅಲ್ಬಾಡಿ ,ಆದಮ್ ಸಾಹೇಬ್, ಇಬ್ರಾಹಿಂ ಅಲ್ಬಾಡಿ,ಖಾದರ್ ಹೆಬ್ರಿ, ಕರಾಣಿ ಸುಹಾನ್ ಬೆಳ್ವೆ ಸಹಕರಿಸಿದರು.

Join Whatsapp