ಬೆಳಗಾವಿ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್

Prasthutha|

ಬೆಳಗಾವಿ: ಮಾಧ್ಯಮಗಳ ಮೇಲೆ ರಾಜ್ಯ ಸರ್ಕಾರದ ನಿರ್ಬಂಧ ಮತ್ತೆ ಮುಂದುವರಿದಿದ್ದು, ಸುದ್ದಿ ವಾಹಿನಿಗಳ ಕ್ಯಾಮರಾಗಳನ್ನು ವಿಧಾನಸಭೆಯ ಆವರಣಕ್ಕೆ ತರದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ನಿರ್ಬಂಧ ಹೇರಿದ್ದಾರೆ.

- Advertisement -

ವಿಧಾನಸಭೆಯ ಸಭಾಂಗಣಕ್ಕೆ ಪ್ರವೇಶ ನಿರ್ಬಂಧಿಸಿ ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಹೊರಗಡೆ ಕ್ಯಾಮರಾಗಳನ್ನು ಬಳಸಲು ಅವಕಾಶವಿತ್ತು. ಆದರೆ ಕ್ಯಾಮರಾಗಳನ್ನು ವಿಧಾನಸಭೆಯ ಹೊರಾಂಗಣಕ್ಕೆ ತರದಂತೆ ಬುಧವಾರ ನಿರ್ಬಂಧ ಹೇರಲಾಗಿದೆ. ಇದನ್ನು ಪ್ರತಿಭಟಿಸಿ ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಪರಿಷತ್ ನಲ್ಲಿ ಮಾಧ್ಯಮಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.

Join Whatsapp