ದೀರ್ಘ ದಂಡ ನಮಸ್ಕಾರ ಮಾಡುವಾಗ ತಲೆ ಮೇಲೆ ಕಾರು ಹರಿದು ಯುವತಿ ಮೃತ್ಯು

Prasthutha|

ಬೆಳಗಾವಿ: ರಸ್ತೆ ಬದಿಯಲ್ಲಿ ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರೊಂದು ತಲೆಯ ಮೇಲೆ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

- Advertisement -

ಐಶ್ವರ್ಯಾ ನಾಯಕ್(22) ಮೃತ ಯುವತಿ.
ಐಶ್ವರ್ಯಾ ಅವರು ಕೃಷ್ಣಾ ನದಿಯಿಂದ ರಸ್ತೆ ಬದಿಯಲ್ಲಿ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹರಕೆ ತೀರಿಸುವಾಗ ಈ ಅನಾಹುತ ಸಂಭವಿಸಿದೆ.
ಸದ್ಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Join Whatsapp