ಅಕ್ಷರ ಕಲಿಯುವ ಮಕ್ಕಳಿಗೆ ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೊಡಿಸಬೇಕು: ಬಿ. ಕೆ ಹರಿಪ್ರಸಾದ್

Prasthutha|

ಬೆಂಗಳೂರು: ಅಕ್ಷರ ತಿದ್ದುವ ಎಳೆಯ ಮಕ್ಕಳ ಕೈಯಲ್ಲಿ ತ್ರಿಶೂಲ, ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೊಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ  ಅವರು, ಮಡಿಕೇರಿಯ ಶಾಲೆಯೊಂದರಲ್ಲಿ ಬಜರಂಗದಳದ ಗೂಂಡಾಪಡೆ ನಡೆಸಿದ ತರಬೇತಿ ಶಿಬಿರಕ್ಕೆ BJP ಶಾಸಕರುಗಳು ಮಾರ್ಗದರ್ಶಕರು,ರಾಜ್ಯಾಧ್ಯಕ್ಷ ಸಮರ್ಥಕ.! 

ಅಷ್ಟಕ್ಕೂ BJPಯ ಶಾಸಕರ ಮಕ್ಕಳು ಕಾಣಲೇ ಇಲ್ವಲ್ಲಾ? ಬಹುಶಃ ಶಾಸಕರಾಗಲು ತರಬೇತಿ ಪಡೆಯುತ್ತಿರಬೇಕು ಎಂದು ಕುಟುಕಿದರು.



Join Whatsapp