“ಬೇ… ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ” : ಜಾಲತಾಣದಲ್ಲಿ ಪೋಸ್ಟ್ ವೈರಲ್

Prasthutha|

ಬೆಂಗಳೂರು: ‘ಬೇ… ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ..” ಎಂಬ ಪೋಸ್ಟರ್ ಬೆಂಗಳೂರಿನ ಮಲೇಶ್ವರಂ ರಸ್ತೆಯಲ್ಲಿ ಕರೆಂಟ್ ಕಂಬಕ್ಕೆ ಪೋಸ್ಟ್ ಒಂದನ್ನು ಅಂಟಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

- Advertisement -


ಶಾಸಕ ಅಶ್ವಥ್ ನಾರಾಯಣ್ ಕ್ಷೇತ್ರವಾಗಿರುವ ಮಲ್ಲೇಶ್ವರಂನಲ್ಲಿ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆಗಳ ಸಂಪರ್ಕಕ್ಕೆ ಸಾಧ್ಯವಾಗದೆ ಇಲ್ಲಿನ ಜನ ಬೇಸತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಅಂತೂ ಮಲ್ಲೇಶ್ವರಂ ರೋಡ್ ಗಳಲ್ಲಿ ಓಡಾಡುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತರು ಹಿಗೋಂದು ಫೋಸ್ಟ್ ಅಂಟಿಸಿ ಚಾಟಿ ಬೀಸಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ.

Join Whatsapp