ಡಿವೈಎಫ್ಐ ಕಾರ್ಯಕರ್ತನ ಬರ್ಬರ ಹತ್ಯೆ

Prasthutha|

ಪಾಲಕ್ಕಾಡ್: ಡಿವೈಎಫ್ಐ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಣಯೂರ್ ಎಂಬಲ್ಲಿ ನಡೆದಿದೆ.

- Advertisement -

ಡಿವೈಎಫ್ಐ ಒಟ್ಟಪಾಲಂ ಪಣಯೂರ್ ಹೆಲ್ತ್ ಸೆಂಟರ್ ಶಾಖೆಯ ಅಧ್ಯಕ್ಷ ಶ್ರೀಜಿತ್ (27) ಕೊಲೆಯಾದವರು.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಜಯದೇವ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಕೊಲೆಯಾದ ಶ್ರೀಜಿತ್ ಅವರ ನೆರೆಹೊರೆಯವನಾದ ಆರೋಪಿ ಜಯದೇವ ವಿಪರೀತ ಕುಡಿತದ ಚಟ ಹೊಂದಿದವನಾಗಿದ್ದು, ಕುಡಿದು ಮನೆಗೆ ಬಂದು ದಿನಾಲೂ ಜಗಳವಾಡುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿಯೂ ಕೂಡ ಕುಡಿದು ಮನೆಗೆ ಬಂದು ಜಯದೇವ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಎಂದಿನಂತೆ ಜಗಳ ಬಿಡಿಸಲು ಬಂದ ಶ್ರೀಜಿತ್‌ನನ್ನು ಜಯದೇವ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

Join Whatsapp