ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶದ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ

Prasthutha|

- Advertisement -

ಮಣಿಪುರ: ಹಿಂಸಾಚಾರ ಪೀಡಿತ ಮೋರೆ ಎಂಬ ಪಟ್ಟಣದಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. SDPO ಚಿಂಗ್ತಮ್ ಆನಂದ್ ಮೃತರು.

ಅವರು ಮೊರೆಹ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆಲಿಪ್ಯಾಡ್‌ನ್ನು ಪರಿಶೀಲಿಸುತ್ತಿದ್ದಾಗ ಬೆಳಿಗ್ಗೆ 9.30ರ ಸುಮಾರಿಗೆ ಅವರಿಗೆ ಅಪರಿಚಿತರು ಗುಂಡು ಹೊಡೆದು ಪರಾರಿಯಾಗಿದ್ದಾರೆ. ಗುಂಡೇಟಿನ ಗಾಯಗಳೊಂದಿಗೆ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

- Advertisement -

ದಾಳಿಯಲ್ಲಿ ಕುಕಿ ಬಂಡುಕೋರರ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ಶಂಕಿಸುತ್ತಿವೆ. ಆದರೆ ಈ ಬಗ್ಗೆ ಇನ್ನು ಕೂಡ ದೃಢೀಕರಿಸಲಾಗಿಲ್ಲ.

ಗಡಿ ಪಟ್ಟಣವಾದ ಮೋರೆಯಿಂದ ಮಣಿಪುರ ಪೊಲೀಸರನ್ನು ವಾಪಾಸ್ಸು ಕಳುಹಿಸಬೇಕು ಎಂದು ಹಲವಾರು ಬುಡಕಟ್ಟು ಸಂಘಟನೆಗಳು ಒತ್ತಾಯಿಸಿದ ಒಂದು ದಿನಗಳ ನಂತರ ಈ ಘಟನೆ ನಡೆದಿದೆ. ಬುಡಕಟ್ಟು ಜನಾಂಗದವರನ್ನು ಗುರಿಯಾಗಿಸಿಕೊಂಡು ಪೋಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಬುಡಕಟ್ಟು ಸಂಘಟನೆಗಳು ಆರೋಪಿಸಿವೆ.



Join Whatsapp