ಖ್ಯಾತ ಸಾಹಿತಿ ಸಾ.ರಾ.ಅಬೂಬಕರ್ ರಿಗೆ ಬರಗೂರು ಪ್ರಶಸ್ತಿ ಪ್ರದಾನ

Prasthutha|

ಮಂಗಳೂರು: ಖ್ಯಾತ ಸಾಹಿತಿ ಸಾ.ರಾ.ಅಬೂಬಕರ್ ಅವರಿಗೆ ಬರಗೂರು ಪ್ರಶಸ್ತಿ ಪ್ರದಾನವನ್ನು ಬರಗೂರು ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಅವರ ನಿವಾಸದಲ್ಲಿಂದು ನೀಡಿ ಗೌರವಿಸಿದರು.

- Advertisement -

ಈ ಸಂದರ್ಭ ಮಾತನಾಡಿದ ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಸಾ.ರಾ.ಅಬೂಬಕರ್ ಸಾಹಿತ್ಯದ ಮೂಲಕ ಈ ನಾಡಿನ ಸಾಮರಸ್ಯಕ್ಕಾಗಿ ಶ್ರಮಿಸಿದವರು. ಅವರಂತಹ ಮೇರು ಸಾಹಿತಿಗೆ ಬರಗೂರು ಪ್ರತಿಷ್ಠಾನದ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿದೆ. ನಾಡಿನ ಬರಹಗಾರರಿಗೆ ಅವರು ಸ್ಫೂರ್ತಿ, ಮಾದರಿಯಾಗಿದ್ದಾರೆ ಎಂದು ಹೇಳಿದರು.

ಮನಪಾ ಸದಸ್ಯೆ ಸಂಧ್ಯಾ ಆಚಾರ್ಯ, ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಪದಾಧಿಕಾರಿಗಳಾದ ಚಂದ್ರಕಲಾ ನಂದಾವರ, ಗುಲಾಬಿ ಬಿಳಿಮಲೆ, ರೋಹಿಣಿ ಮತ್ತು ಇತರ ಗಣ್ಯರಾದ  ಮಂಜುನಾಥ್ ಸಾಗರ್, ಲೋಲಾಕ್ಷ, ಪ್ರಕಾಶ್ ಸಾಲ್ಯಾನ್  ಹಾಗೂ ಸಾ.ರಾ.ಅಬೂಬಕರ್ ಅವರ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Join Whatsapp